ಮಾಮ್‌ಕೋಸ್‌ನಿಂದ ₹ 1.5 ಲಕ್ಷ ಚೆಕ್ ವಿತರಣೆ | ಅಡಿಕೆ ಬೆಳೆಗಾರರ, ಕೂಲಿ ಕಾರ್ಮಿಕರ ಏಳಿಗೆಗಾಗಿ ಸಂಸ್ಥೆ ಬದ್ಧ ; ಕೆ.ವಿ. ಕೃಷ್ಣಮೂರ್ತಿ

Written by Mahesha Hindlemane

Published on:

ಹೊಸನಗರ ; ನಮ್ಮ ಮಲೆನಾಡು ಮಾರಾಟದ ಸಂಸ್ಥೆ ಸುಮಾರು 85 ವರ್ಷಗಳಿಂದ ಅಡಿಕೆ ಬೆಳೆಗಾರರ ಹಾಗೂ ಕೂಲಿ ಕಾರ್ಮಿಕರ ಏಳಿಗೆಗೆ ಬದ್ಧವಾಗಿದ್ದು ಯಾವುದೇ ಅಡಿಕೆ ಬೆಳೆಗಾರರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ತೊಂದರೆಯಾದರೂ ನಮ್ಮ ಸಂಸ್ಥೆ ಅವರಿಗೆ ಬೆನ್ನೆಲುಬಾಗಿ ಸಹಾಯ ಹಸ್ತ ಚಾಚುತ್ತದೆ ಎಂದು ಮಲೆನಾಡು ಅಡಿಕೆ ಮಾರಾಟಗಾರ ಸಹಕಾರ ಸಂಘದ ನಿರ್ದೇಶಕ ಕೆ.ವಿ ಕೃಷ್ಣಮೂರ್ತಿ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಕೂಲಿ ಕಾರ್ಮಿಕನಿಗೆ ₹ 1.5 ಲಕ್ಷ ಚೆಕ್ ವಿತರಿಸಿ ಮಾತನಾಡಿದ ಅವರು, ಶ್ರೀಪತಿ ಎನ್.ಆರ್ ತೋಟದಲ್ಲಿ ಕಾಳುಮೆಣಸು ಕಟಾವು ಮಾಡುವ ಸಂದರ್ಭದಲ್ಲಿ ಅವಿನಾಶ್ ಎನ್ ಎಂಬುವವರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕಾಲು ಮುರಿದಿದ್ದು ಮಲೆನಾಡು ಅಡಿಕೆ ಬೆಳೆಗಾರರ ಸಂಘದ ಗುಂಪಿನಿಂದ ಶಸ್ತ್ರ ಚಿಕಿತ್ಸೆಗೆ ಒಂದೂವರೆ ಲಕ್ಷ ರೂ. ಮಂಜೂರಾಗಿದೆ. ಈ ವರ್ಷ ಸಾಕಷ್ಟು ಜನ ಕೂಲಿ ಕಾರ್ಮಿಕರಿಗೆ ಪರಿಹಾರದ ರೂಪದಲ್ಲಿ ಗುಂಪು ವಿಮೆ ಹಣವನ್ನು ನಮ್ಮ ಸಂಸ್ಥೆಯಿಂದ ವಿತರಿಸಲಾಗಿದೆ. ಪ್ರತಿಯೊಬ್ಬ ಅಡಿಕೆ ಬೆಳೆಗಾರರು ಗುಂಪು ವಿಮೆ ಮಾಡಿಸಿಕೊಳ್ಳಿ ನಿಮಗೂ ಹಾಗೂ ನಿಮ್ಮ ಜೊತೆ ಕೆಲಸ ಮಾಡುವ ಕೂಲಿ ಕಾರ್ಮಿಕರ ಕುಟುಂಬಕ್ಕೂ ಸಹಾಯವಾಗುತ್ತದೆ ಎಂದು ಹೇಳಿ, 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಶಿವಮೊಗ್ಗ ಪ್ರೇರಣ ಸಭಾಂಗಣ ಪಿಸಿಟ್ ಕಾಲೇಜ್ ಆವರಣದಲ್ಲಿ ಸೆ. 20ಪ ಶನಿವಾರ ಕರೆಲಾಗಿದ್ದು ಎಲ್ಲ ಸದಸ್ಯರು ಭಾಗವಹಿಸುವಂತೆ ಈ ಸಂದರ್ಭದಲ್ಲಿ ಕೇಳಿಕೊಂಡರು.

ಈ ವೇಳೆ ನಿರ್ದೇಶಕರಾದ ಹೆಚ್. ಧರ್ಮೇಂದ್ರ ವ್ಯವಸ್ಥಾಪಕರಾದ ಗಣಪತಿ, ಸಿಬ್ಬಂದಿಗಳಾದ ವಿದ್ಯಾ, ಲೀಲಾವತಿ, ದಿವ್ಯಾ, ಮಧುಸೂದನ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment