ಹೊಸನಗರ

ಮೊಬೈಲ್ ನೆಟ್‌ವರ್ಕ್ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಪಾದಯಾತ್ರೆ : ಪೂರ್ವಭಾವಿ ಸಭೆ

ಹೊಸನಗರ ; ತಾಲೂಕಿನಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ತಾಲ್ಲೂಕಿನ ನಾಗರಕೊಡಿಗೆ ಸುತ್ತಮುತ್ತಲಿನ ವಿವಿಧ ಹಳ್ಳಿಯ ಗ್ರಾಮಸ್ಥರು ನಾಗರಕೊಡಿಗೆಯಿಂದ ಹೊಸನಗರ ತಾಲೂಕು ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳುವ ಸದುದ್ದೇಶಕ್ಕಾಗಿ ಫೆ. 21ರ ಶನಿವಾರ ಸಂಜೆ 6 ಗಂಟೆಗೆ ತ್ರಿಣಿವೆ ಗ್ರಾಮದ ಗ್ರಾಮ ಕಲಾಮಂದಿರದಲ್ಲಿ ಪೂರ್ವಭಾವಿ ಸಭೆಯನ್ನು ಸರ್ವಧರ್ಮ ಸೌಹಾರ್ದ ಟ್ರಸ್ಟ್‌ನ ಅಧ್ಯಕ್ಷ, ಜನಪರ ಹೋರಾಟಗಾರ, ಸಮಾಜ ಸೇವಕ, ರಾಜ್ಯ ಅಹಿಂದ ಸಂಘಟನೆಯ ರೈತ ಸಂಘ ವಿಭಾಗದ ಕಾರ್ಯದರ್ಶಿ ತ್ರಿಣಿವೆ ಜಯರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಸಭೆ ಕರೆಯಲಾಗಿದೆ.

ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಆಗಮಿಸಿ ತಮ್ಮ ಅಹವಾಲು ಸಲ್ಲಿಸಿ, ಸಲಹೆ-ಸಹಕಾರ ನೀಡಬೇಕೆಂದು ಹೋರಾಟದ ಮುಂಚೂಣಿಯ ಜಯರಾಮ ಶೆಟ್ಟಿ ತಿಳಿಸಿದ್ದಾರೆ.

Leave a Comment