ರಿಪ್ಪನ್ಪೇಟೆ ; ಆನಂದಪುರ ಸಮೀಪದ ಯಡೇಹಳ್ಳಿ ಕ್ರಾಸ್ ಬಳಿ ಅಕ್ರಮವಾಗಿ ವನ್ಯ ಪ್ರಾಣಿ ಚಿಂಕಾರ ಚರ್ಮವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನಾದರಿ ಪೊಲೀಸ್ ಅರಣ್ಯ ಸಂಚಾರಿ ದಳ ಪಿಎಸ್ಐ ವಿನಾಯಕ ಕೆ. ಮತ್ತು ಸಿಬ್ಬಂದಿವರ್ಗ ದಿಢೀರ್ ದಾಳಿ ನಡೆಸಿ ಆರೋಪಿಯನ್ನು ಬಂಧಿಸುವ ಮೂಲಕ ಚಿಂಕಾರ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಅರ್ಜುನ ಬಿನ್ ರಾಮಪ್ಪ ನವಲುಗುಂದಾ ಎಂದು ಗುರುತಿಸಲಾಗಿದೆ.
ಪತ್ತೆ ಕಾರ್ಯಾಚರೆಣೆಯಲ್ಲಿ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್ಐ ವಿನಾಯಕ ಕೆ.ಸಿಬ್ಬಂದಿಗಳಾದ ವಿಶ್ವನಾಥ ಆರ್, ಚಂದ್ರಕಾಂತ್, ಆಂಜನೇಯ ಪಾಟೀಲ್, ಮಹೇಶ, ಪ್ರಮೋದ್ ಕುಮಾರಿ, ಹಾಲೇಶ್ ಹಾಜರಿದ್ದರು.

