Ripponpete

1.5 ಲಕ್ಷ ರೂ. ಮೌಲ್ಯದ ಚಿನ್ನದ ಸರ ಮರಳಿಸಿದ ಪರಶುರಾಮ !

ರಿಪ್ಪನ್‌ಪೇಟೆ ; ಇಲ್ಲಿನ ಬಸ್ ತಂಗುದಾಣದಲ್ಲಿ ಎಚ್ಚರವಿಲ್ಲದೆ ಮಲಗಿದ್ದ ಭದ್ರಾವತಿಯ ಕೈಮರ ನಿವಾಸಿ ಸುಂದರೇಶ ಎಂಬುವರ ಕೊರಳಿನಲ್ಲಿದ್ದ ಸುಮಾರು 15 ಗ್ರಾಂ ತೂಕದ ಚಿನ್ನದ ಸರ ಕಳಚಿ ಕೆಳಗೆ ಉದುರಿ ಬಿದ್ದಿರುವುದನ್ನು ಕಂಡು ತಕ್ಷಣ ಆತನ ಸ್ಥಿತಿಯನ್ನು ನೋಡಿ ಉದುರಿ ಬಿದ್ದ ಚಿನ್ನದ ಸರವನ್ನು ಪೊಲೀಸ್ ಠಾಣೆಗೆ ಕೆದಲುಗುಡ್ಡೆ ನಿವಾಸಿ ಪರಶುರಾಮ ಎಂಬುವರು ತಲುಪಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಹೌದು, ಸಮೀಪದ ಕೋಡೂರು ಸಮೀಪದ ಶಾಂತಪುರದ ಮಾನವ ಮನೆಗೆ ಬಂದಿದ್ದ ಭದ್ರಾವತಿ ಕೈಮರದ ನಿವಾಸಿ ಸುಂದರೇಶ ಎಂಬುವನ್ನು ರಿಪ್ಪನ್‌ಪೇಟೆಯ ಬಸ್ ತಂಗುದಾಣದ ಕಟ್ಟೆಯಲ್ಲಿ ಎಚ್ಚರ ತಪ್ಪಿ ಮಲಗಿದ್ದು ಆತನ ಕೊರಳಿನಿಂದ ಸುಮಾರು 1.50 ಲಕ್ಷ ರೂ. ಮೌಲ್ಯದ 15 ಗ್ರಾಂ ತೂಕದ ಬಂಗಾರದ ಸರ ಕಳಚಿ ಕೆಳಗಿ ಬಿದ್ದಿದ್ದನ್ನು ಗಮಸಿದ ಪ್ರಯಾಣಿಕ ಕೆದಲುಗುಡ್ಡೆ ಪರಶುರಾಮ ಕೆಳಗೆ ಬಿದ್ದ ಸರವನ್ನು ಎತ್ತಿಕೊಂಡು ಆತನನ್ನು ಎಚ್ಚರಿಸಲು ನೋಡಿದರೆ ಪರಿವೇ ಇಲ್ಲದೆ ಇರುವುದನ್ನು ಗಮನಿಸಿ ತಕ್ಷಣ ಪೊಲೀಸ್ ಠಾಣೆಗೆ ತೆರಳಿ ಸಿಕ್ಕ ಲಕ್ಷಾಂತರ ರೂ. ಬೆಲೆ ಬಾಳುವ ಬಂಗಾರದ ಸರವನ್ನು ಠಾಣಾಧಿಕಾರಿಗಳಿಗೆ ನಡೆದ ಘಟನೆ ವಿಚಾರವನ್ನು ತಿಳಿಸಿ ಆತನ ಕಡೆಯವರನ್ನು ಪತ್ತೆ ಮಾಡಿ ವಾಪಾಸ್ ಕೊಡುವಂತೆ ತಿಳಿಸಿದ್ದಾರೆ.

ರಿಪ್ಪನ್‌ಪೇಟೆ ಠಾಣೆ ಪಿಎಸ್‌ಐ ಪ್ರವೀಣ್  ಕಾರ್ಯಾಚರಣೆ ನಡೆಸಿ ಸಿಕ್ಕ ಬಂಗಾರದ ಸರವನ್ನು ವಾರಸುದಾರನ ಸಂಬಂಧಿಕರಿಗೆ ಹಸ್ತಾಂತರ ಮಾಡಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಈ ಸಂದರ್ಭದಲ್ಲಿ ಕೆರೆಹಳ್ಳಿ ರವೀಂದ್ರ, ಕೆದಲುಗುಡ್ಡೆಯ ನಿವಾಸಿ ಗ್ರಾಮ ಪಂಚಾಯ್ತಿ ಸದಸ್ಯ ದಿವಾಕರ, ಪರಶುರಾಮ ಹಾಗೂ ಸುಂದರೇಶ ಸಂಬಂಧಿಕರು ಹಾಜರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]