“ವೋಟ್ ಚೋರ್, ಗದ್ದಿ ಚೋಡ್” – ಪ್ರಜಾಪ್ರಭುತ್ವ ಉಳಿಸುವ ಜನಹೋರಾಟ ; ಶ್ವೇತಾ ಬಂಡಿ

Written by Mahesha Hindlemane

Published on:

ರಿಪ್ಪನ್‌ಪೇಟೆ ; “ಮತ ಕದ್ದುಕೊಂಡು ಗದ್ದಿಗೆ ಏರಿದವರು ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದ್ದಾರೆ. ಜನರ ಹಕ್ಕು ಕದ್ದುಕೊಂಡು ಕುರ್ಚಿಯಲ್ಲಿ ಕೂತವರೇ, ನಿಮ್ಮ ದಿನಗಳು ಎಣಿಕೆಯಲ್ಲಿವೆ!” ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ ತೀವ್ರ ಟೀಕೆ ಮಾಡಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸೋಮವಾರ ಸಂಜೆ ರಿಪ್ಪನ್‌ಪೇಟೆ ವಿನಾಯಕ ಸರ್ಕಲ್ ಹತ್ತಿರ ನಡೆದ “ವೋಟ್ ಚೋರ್, ಗದ್ದಿ ಚೋಡ್” ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿದ ಅವರು, “ಜನರ ಪವಿತ್ರ ಮತವನ್ನು ಕದ್ದುಕೊಂಡು ಅಧಿಕಾರದಲ್ಲಿರುವುದು ಪ್ರಜಾಪ್ರಭುತ್ವದ ಮೇಲಿನ ದೊಡ್ಡ ಅಪರಾಧ. ಈ ಕಳಂಕದ ವಿರುದ್ಧ ಕಾಂಗ್ರೆಸ್ ಪಕ್ಷ ಜನಶಕ್ತಿ ಬಳಸಿ ಹೋರಾಟ ಆರಂಭಿಸಿದೆ. ಮತದ ಗೌರವ ಕಾಪಾಡುವ ಹೋರಾಟದಲ್ಲಿ ಪ್ರತಿಯೊಬ್ಬ ಪ್ರಜೆಯೂ ಕೈಜೋಡಿಸಬೇಕು” ಎಂದು ಕರೆ ನೀಡಿದರು.

“ಪ್ರಜಾಪ್ರಭುತ್ವ ಉಳಿಸುವ ಹೋರಾಟ ಕಾಂಗ್ರೆಸ್‌ನ ಕರ್ತವ್ಯವಲ್ಲ, ಜನರ ಶಪಥ!”
– ಶ್ವೇತಾ ಬಂಡಿ, ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

“ಸತ್ಯವನ್ನು ಒತ್ತಿ ಮುಚ್ಚಲು ಯತ್ನಿಸುವ ಅಧಿಕಾರಿಗಳಿಗೆ ಜನರ ಕೋಪ ತಟ್ಟದೇ ಇರದು. ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದ ಪರವಾಗಿ, ಸತ್ಯದ ಪರವಾಗಿ ಹೋರಾಟ ಮುಂದುವರಿಸುತ್ತದೆ. ಮತ ಕದ್ದುಕೊಂಡು ಗದ್ದಿಗೆ ಕೂತವರು ಜನರ ನ್ಯಾಯಾಲಯದಲ್ಲಿ ತಪ್ಪಿತಸ್ಥರಾಗುತ್ತಾರೆ,” ಎಂದು ಅವರು ಹೇಳಿದರು.

ಈ ಅಭಿಯಾನವನ್ನು ಶಾಸಕ ಹಾಗೂ ಕರ್ನಾಟಕ ಕೈಗಾರಿಕಾ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ಪಿ. ರಾಮಚಂದ್ರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಈಶ್ವರಪ್ಪಗೌಡ ಹಾರೋಹಿತ್ತಲು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್, ಡಿ.ಇ. ಮಧುಸೂದನ್, ನಿರೋಪ್ ಕುಮಾರ್, ಆಸಿಫ್ ಭಾಷಾಸಾಬ್, ಪ್ರಕಾಶ್ ಪಾಲೇಕರ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಜಾಭಿಮಾನಿಗಳು ಭಾಗವಹಿಸಿದರು.

Leave a Comment