ರಿಪ್ಪನ್ಪೇಟೆ ; ಶುಭಕಾರ್ಯಕ್ಕೆ ತೆರಳಿದ್ದ ಇಲ್ಲಿನ ತೀರ್ಥಹಳ್ಳಿ ರಸ್ತೆಯ ನಿವಾಸಿ ಅಬ್ಬಾಸ್ ಎಂಬುವರ ಮನೆ ಬಾಗಿಲಿನ ಬೀಗವನ್ನು ಮುರಿದು ಮನೆಯಲ್ಲಿದ ಚಿನ್ನಾಭರಣ ಹಾಗೂ ಟ್ರಜೂರಿಯನ್ನು ಕಳವು ಮಾಡಿಕೊಂಡು ಪರಾರಿಯಾದ ಘಟನೆ ಶನಿವಾರ ಸಂಜೆ ನಡೆದಿದೆ.
ಮನೆಯಲ್ಲಿಟ್ಟಿದ್ದ ಚಿನ್ನ ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ರಾತ್ರಿ ವಾಪಾಸ್ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಮನೆಯ ಮುಂಭಾಗಿಲಿನ ಬೀಗ ಹಾಗೂ ಬೀರುವಿನ ಬೀಗ ಮುರಿದಿರುವ ಕಳ್ಳರು ಚಿನ್ನಾಭರಣ ವಜ್ರದ ಹರಳು ಹಾಗೂ ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆನ್ನಲಾಗಿದೆ.
ಕಳೆದ ಕೆಲವು ವರ್ಷಗಳ ಹಿಂದೆ ಸಹ ಇದೇ ಮನೆಯ ಹತ್ತಿರ ನಿವೃತ್ತ ಪೊಲೀಸ್ ಎಎಸ್ಐ ಇವರ ಮನೆಯಲ್ಲಿ ಹಿಂಬಾಗಿಲ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಹಗಲು ವೇಳೆಯಲ್ಲಿಯೇ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದು ಪುನಃ ಇದೇ ರಸ್ತೆಯಲ್ಲಿನ ಸಮೀಪದ ಮನೆಯಲ್ಲಿ ಕಳವು ನಡೆದಿರುವುದು ಸಾರ್ವಜನಿಕರಲ್ಲಿ ಭಯ ಮೂಡಿಸಿದೆ.
Malnad Times App ಡೌನ್ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

