ಶಿವಮೊಗ್ಗ:ಶಿವಮೊಗ್ಗ–ರಿಪ್ಪನ್ಪೇಟೆ ರೈಲ್ವೆ ಮಾರ್ಗದಲ್ಲಿ ನಡೆಯುತ್ತಿರುವ ತಾಂತ್ರಿಕ ಮತ್ತು ಭದ್ರತಾ ಪರಿಶೀಲನಾ ಕಾರ್ಯಗಳ ಹಿನ್ನೆಲೆ, ಅಕ್ಟೋಬರ್ 23ರಿಂದ 26ರವರೆಗೆ ನಾಲ್ಕು ದಿನಗಳ ಕಾಲ ರಸ್ತೆ ಸಂಚಾರ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ರೈಲ್ವೆ ಮಾರ್ಗ ಪರಿಶೀಲನೆ ಕಾರ್ಯದ ಹಿನ್ನೆಲೆಯಲ್ಲಿ ಅಕ್ಟೋಬರ್ 23ರಿಂದ 26ರವರೆಗೆ ಸಾರ್ವಜನಿಕ ಸಂಚಾರ ನಿಷೇಧ
ಈ ಅವಧಿಯಲ್ಲಿ ರೈಲ್ವೆ ಗೇಟ್ ಹತ್ತಿರ ನಡೆಯಲಿರುವ ಪರಿಶೀಲನಾ ಕಾರ್ಯದ ಕಾರಣದಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ.
ಸಂಚಾರ ನಿಷೇಧ ಅವಧಿ ಮತ್ತು ಸ್ಥಳಗಳು:
- ಅಕ್ಟೋಬರ್ 23 ಬೆಳಿಗ್ಗೆ 7.00ರಿಂದ ಅಕ್ಟೋಬರ್ 24 ಸಂಜೆ 6.00ರವರೆಗೆ:
ಅರಸಾಳು ರೈಲ್ವೆ ಗೇಟ್ ಹತ್ತಿರ ಪರೀಕ್ಷಾ ಕಾರ್ಯ ನಡೆಯಲಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಸಂಪೂರ್ಣ ನಿಷೇಧ. - ಅಕ್ಟೋಬರ್ 25 ಬೆಳಿಗ್ಗೆ 7.00ರಿಂದ ಅಕ್ಟೋಬರ್ 26 ಸಂಜೆ 6.00ರವರೆಗೆ:
ಸೂಡೂರು ರೈಲ್ವೆ ಗೇಟ್ ಹತ್ತಿರ ಮಾರ್ಗ ಪರಿಶೀಲನೆ ನಡೆಯಲಿದ್ದು, ಸಂಚಾರಕ್ಕೆ ತಾತ್ಕಾಲಿಕ ಬಂದ್ ವಿಧಿಸಲಾಗಿದೆ.
ಬದಲಿ ಮಾರ್ಗಗಳು:
ಅ.23 ಬೆಳಿಗ್ಗೆ 7ರಿಂದ ಅ.24 ಸಂಜೆ 6ರವರೆಗೆ:
1️⃣ ರಿಪ್ಪನ್ಪೇಟೆ → ಮೂಗೂಡ್ತಿ → ಬಸವಾಪುರ → 5 MS → ಆಯನೂರು → ಶಿವಮೊಗ್ಗ
2️⃣ ರಿಪ್ಪನ್ಪೇಟೆ → ಯಡೆಹಳ್ಳಿ → ಚೊರಡಿ → ಆಯನೂರು → ಶಿವಮೊಗ್ಗ
ಅ.25 ಬೆಳಿಗ್ಗೆ 7ರಿಂದ ಅ.26 ಸಂಜೆ 6ರವರೆಗೆ:
1️⃣ ರಿಪ್ಪನ್ಪೇಟೆ → ಸೂಡೂರು → ಶೆಟ್ಟಿಕೆರೆ → ಚೊರಡಿ → ಆಯನೂರು
2️⃣ ರಿಪ್ಪನ್ಪೇಟೆ → ಯಡೆಹಳ್ಳಿ → ಚೊರಡಿ → ಆಯನೂರು → ಶಿವಮೊಗ್ಗ
3️⃣ ಆಯನೂರು → 5 MS → ಬಸವಾಪುರ → 9 MS → ಅರಸಾಳು → ರಿಪ್ಪನ್ಪೇಟೆ
ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದು – ರೈಲ್ವೆ ಸುರಕ್ಷತಾ ಕಾರ್ಯದ ಸಮಯದಲ್ಲಿ ಸೂಚಿಸಿರುವ ಬದಲಿ ಮಾರ್ಗಗಳನ್ನು ಮಾತ್ರ ಬಳಸುವಂತೆ, ಮತ್ತು ಇಲಾಖೆಗೆ ಸಹಕರಿಸುವಂತೆ ವಿನಂತಿಸಿದ್ದಾರೆ.
ಪೊಲೀಸ್ ಹುತಾತ್ಮರ ದಿನಾಚರಣೆ: ಕರ್ತವ್ಯದಲ್ಲಿ ಪ್ರಾಣ ತ್ಯಾಗಿಸಿದ ಯೋಧರಿಗೆ ನಮನ

