ಶಿವಮೊಗ್ಗ:ಮಲೆನಾಡು ಜನತೆಗೆ ಸಂತಸದ ಸುದ್ದಿ. ಇದೀಗ ಬೆಂಗಳೂರಿನಿಂದ ಶಿವಮೊಗ್ಗದ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ (RQY) ಗೆ ಇಂಡಿಗೋ ಕಂಪನಿಯ ವಿಮಾನ ಹಾರಾಟಗಳು ಪ್ರತಿ ದಿನ ಲಭ್ಯವಾಗಲಿವೆ. ಸೆಪ್ಟೆಂಬರ್ 21ರಿಂದ ಆರಂಭವಾಗುವ ಈ ಸೇವೆ, ಹಿಂದೆ ಇದ್ದಂತೆ ಪರ್ಯಾಯ ದಿನಗಳಲ್ಲಿ ಅಲ್ಲದೇ ಪ್ರತಿದಿನ ಲಭ್ಯವಿರುವುದು ವಿಶೇಷ.
ಹಾರಾಟದ ವೇಳಾಪಟ್ಟಿ
✈️ ಬೆಂಗಳೂರಿನಿಂದ ಶಿವಮೊಗ್ಗಕ್ಕೆ (6E 7731): ಬೆಳಿಗ್ಗೆ 9:35 ಕ್ಕೆ ಹೊರಟು, 10:45 ಕ್ಕೆ ಆಗಮನೆ
✈️ ಶಿವಮೊಗ್ಗದಿಂದ ಬೆಂಗಳೂರಿಗೆ (6E 7732): ಬೆಳಿಗ್ಗೆ 11:05 ಕ್ಕೆ ಹೊರಟು, 12:05 ಕ್ಕೆ ಆಗಮನೆ
ಮಲೆನಾಡಿನ ಅಭಿವೃದ್ಧಿಗೆ ಬಲ
ಈ ಹೊಸ ನಿರ್ಧಾರವು ಮಲೆನಾಡು ಪ್ರದೇಶದ ಸಂಪರ್ಕತೆ, ಆರ್ಥಿಕ ಚಟುವಟಿಕೆ, ಪ್ರವಾಸೋದ್ಯಮ ಹಾಗೂ ಉದ್ಯಮಗಳಿಗೆ ಮಹತ್ತರ ಬಲ ನೀಡಲಿದೆ. ಪ್ರತಿದಿನ ವಿಮಾನ ಸಂಚಾರ ಇರುವುದರಿಂದ ವಿದ್ಯಾರ್ಥಿಗಳು, ಉದ್ಯೋಗಸ್ಥರು, ಪ್ರವಾಸಿಗರು ಹಾಗೂ ವ್ಯಾಪಾರಿಗಳಿಗೆ ಹೆಚ್ಚು ಅನುಕೂಲವಾಗಲಿದೆ.
ಈ ಸೇವೆ ಸಾಧ್ಯವಾಗಲು ಮುಂದಾಗಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ಮೋಹನ್ ನಾಯ್ಡು, ಇಂಡಿಗೋ ಸಂಸ್ಥೆ ಹಾಗೂ ಭಾರತ ಸರ್ಕಾರಕ್ಕೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದಾರೆ. ಕರ್ನಾಟಕದ ಒಳನಾಡಿನಲ್ಲಿ ವಿಮಾನ ಸಂಚಾರವನ್ನು ಬಲಪಡಿಸುವಲ್ಲಿ ಇದು ಮಹತ್ತರ ಹೆಜ್ಜೆಯಾಗಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ .