ರಿಪ್ಪನ್ಪೇಟೆ: ತಾವು ಬೆಳೆದ ಆಹಾರ ಧಾನ್ಯಗಳನ್ನು ಇನ್ನೊಬ್ಬರಿಗೆ ದಾನ ಮಾಡಿದರೆ ಮುಂದಿನ ವರ್ಷದಲ್ಲಿ ಫಸಲು ಹೆಚ್ಚಾಗುವುದು ಎಂಬ ನಂಬಿಕೆ ರೈತರದಾಗಿದೆ. ಹಾಗೇ ವರ್ಷದಲ್ಲಿ ಬೆಳೆದ ಕಬ್ಬಿನ ಆಲೆಮನೆ ಮಾಡಿ ಒಂದು ದಿನ ರಾಜ್ಯ ಹೆದ್ದಾರಿ ತೀರ್ಥಹಳ್ಳಿ – ಸಾಗರ ರಸ್ತೆಯ ಗರ್ತಿಕೆರೆ ಬಳಿಯ ಎಣ್ಣೆನೋಡ್ಲು ಬಸ್ ನಿಲ್ದಾಣದಲ್ಲಿ ಹೋಗಿ ಬರುವ ಎಲ್ಲಾ ಬಸ್ ಮತ್ತು ಲಾರಿ ಇನ್ನಿತರ ದ್ವಿಚಕ್ರವಾಹನಗಳ ಪ್ರಯಾಣಿಕರಿಗೆ ಉಚಿತವಾಗಿ ಕಬ್ಬಿನ ಹಾಲುಯನ್ನು ವಿತರಿಸಿ ತೃಪ್ತಿಪಟ್ಟರು.
ಬಸ್ನಲ್ಲಿ ಪ್ರಯಾಣಿಕರು ಮಕ್ಕಳು ಸೇರಿದಂತೆ ಮಹಿಳೆಯರು ಮತ್ತು ಪುರುಷರು ಕಬ್ಬಿನ ಹಾಲು ಕುಡಿದು ನಿಮ್ಮ ಈ ಸೇವೆ ಇನ್ನೂ ವೃದ್ದಿಯಾಗಲಿ ಎಂದು ಹರಿಸಿದರ ಪರಿಣಾಮ ಬರುವ ವರ್ಷದಲ್ಲಿ ಇನ್ನೂ ವೃದ್ದಿಯಾಗುವುದೆಂಬ ನಂಬಿಕೆಯಿಂದಾಗಿ ಕಳೆದ 10 ವರ್ಷದಿಂದ ಹೊಳೆಕೇವಿ ಗ್ರಾಮದ ರೈತರು ಟಿಲ್ಲರ್ನಲ್ಲಿ ಎರಡು ಡ್ರಮ್ ಕಬ್ಬಿನ ಹಾಲನ್ನು ತುಂಬಿಕೊಂಡು ಬಂದು ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ವಿತರಣೆ ಮಾಡಿದರು. ಕಬ್ಬಿನ ಹಾಲು ಕುಡಿದವರು ನಮ್ಮ ಹೊಟ್ಟೆ ತಣಿಸಿದ್ದೀರಿ ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದ ಅಶೀರ್ವಾದವೇ ನಮ್ಮ ಈ ಕಾಯಕಕ್ಕೆ ಸ್ಫೂರ್ತಿಯಾಗಿದೆ ಎಂದು ರೈತರು ಹೇಳಿಕೊಂಡರು .
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…