ರಿಪ್ಪನ್ಪೇಟೆ : ದೀಪಾವಳಿ (Deepavali) ಪಾಡ್ಯದಂದು ಗೋವುಗಳನ್ನು ಪೂಜಿಸುತ್ತೇವೆ. ಸನಾತನ ಧರ್ಮ ಶಾಸ್ತ್ರದಲ್ಲಿ ಗೋವುಗಳು (Cows) ಪೃಥ್ವಿಗೆ ಹಾಲುಣಿಸುವ ಮಾತೃ ಸಮಾನ ಎಂಬ ವಿಚಾರವನ್ನು ಸರ್ವರೂ ಅರಿತುಕೊಳ್ಳಬೇಕು ಎಂದು ಹೊಂಬುಜ (Hombuja) ಜೈನ ಮಠದ (Jaina Mutt) ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ತಿಳಿಸಿದರು.
ಶ್ರೀಕ್ಷೇತ್ರ ಹೊಂಬುಜ ಶ್ರೀಮಠದ ಗೋಶಾಲೆಯಲ್ಲಿ ಧಾನ್ಯಾದಿ ಕಜ್ಜಾಯಗಳನ್ನು ಗೋವುಗಳಿಗೆ ಸೇವಿಸಲು ನೀಡಿ, ಆಗಮೋಕ್ತ ವಿಧಾನದಲ್ಲಿ ದೀಪ ಬೆಳಗಿಸಿ, ಗಂಧ ಕುಂಕುಮ ಪ್ರಸಾದ, ತಿಲಕವಿಟ್ಟು ಪೂಜಿಸಿದ ಬಳಿಕ ಪ್ರವನಚದಲ್ಲಿ ತಿಳಿಸಿದರು.
ಕೃಷಿ ಕ್ಷೇತ್ರ ವರ್ಧಿಸಲು ಪ್ರತಿಯೋರ್ವ ರೈತರು ಕಾಮಧೇನು ಸ್ವರೂಪದ ಗೋವುಗಳನ್ನು ಪೋಷಿಸುವುದು ಭಾರತೀಯ ಸನಾತನ ಧರ್ಮದ ಸಂಕೇತ. ದೀಪಾವಳಿ ಪರ್ವದ ಆಚರಣೆಯಿಂದ ರಾಷ್ಟ್ರ ಬೆಳಗಲೆಂದು ಶುಭಾಶೀರ್ವಾದ ಮಾಡಿದರು.
ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಅಬೀಷ್ಠವರಪ್ರದಾಯಿನಿ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕ್ಷೇತ್ರಪಾಲ, ತ್ರಿಕೂಟ ಜಿನಾಲಯಗಳಲ್ಲಿ ಪೂಜಾ ವಿಧಾನಗಳಲ್ಲಿ ಊರ-ಪರವೂರ ಭಕ್ತರು ಪಾಲ್ಗೊಂಡರು.
ಚಿಕ್ಕಮಗಳೂರು : ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 03 ರಂದು…
ರಿಪ್ಪನ್ಪೇಟೆ: ಇಂದು ಬೆಳಗ್ಗೆ ದರಗೆಲೆ ತರಲು ಕಾಡಿಗೆ ತೆರಳಿದ್ದ ರೈತ ತಿಮ್ಮಪ್ಬ ಎಂಬ ರೈತ ಆನೆ ದಾಳಿಗೆ ಬಲಿಯಾಗಿದ್ದು ಮೃತ…
ಹೊಸನಗರ : ಮೇ 03 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ರಿಪ್ಪನ್ಪೇಟೆ: ಭಕ್ತರು ಭಕ್ತಿಯಿಂದ ಪ್ರಾರ್ಥಿಸಿದರೆ ದೇವರು ನಮ್ಮ ಹೃದಯಗಳಲ್ಲಿ ನೆಲೆಸುತ್ತಾನೆ. ಶ್ರದ್ದಾಭಕ್ತಿಯಿಂದ ಭಗವಂತನ ನಾಮಸ್ಮರಣೆ ಮಾಡಿದರೆ ಶಾಂತಿ ನೆಮ್ಮದಿ ಕರುಣಿಸುತ್ತಾನೆಂದು…
ರಿಪ್ಪನ್ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನಲೆಯಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿ ನಿಮಿತ್ತ ಮೇ…
ಹೊಸನಗರ: ತಾಲ್ಲೂಕಿನ ವಾರಂಬಳ್ಳಿಯ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಮನವಿ ಮಾಡಿಕೊಂಡಿದ್ದು ಈವರೆಗೂ ಬೇಡಿಕೆ ಈಡೇರದೆ ಚುನಾವಣೆ…