ರಿಪ್ಪನ್ಪೇಟೆ: ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಹಬ್ಬ ಬಂತೆಂದರೇ ಸಾಕು ಕೋಳಿ, ಕುರಿ, ಹಂದಿಗಳನ್ನು ಗ್ರಾಮ ದೇವರಿಗೆ ಬಲಿ ನೀಡಿ ಭಕ್ತಿಯ ಸಮರ್ಪಣೆ ಸೇವೆ ಸಲ್ಲಿಸುವುದು ಮಲೆನಾಡಿನ ಪದ್ದತಿ.
ಇಂದು ಜಂಬಳ್ಳಿ, ಕುಕ್ಕಳಲೇ, ಮಾವಿನಸರ, ತಾರಿಗ, ನಂದಿಗ, ಈಚಲುಕೊಪ್ಪ ಗ್ರಾಮದಲ್ಲಿ ಗ್ರಾಮದ ಭೂತಪ್ಪ, ದೋಣ್ಣೆ ಭೂತಪ್ಪ ಹಾಗೂ ವಡ್ಡೆರಭೂತಪ್ಪ ದೇವರು ಸೇರಿದಂತೆ ಸುತ್ತಮುತ್ತಲಿನ ಪರಿವಾರ ಚೌಡಿ ಭೂತಪ್ಪ, ಯಕ್ಷಿ, ರಣ ದೇವರುಗಳಿಗೆ ದೀಪಾವಳಿ ಹಬ್ಬದಲ್ಲಿ ವಿಶೇಷ ಪೂಜೆ ನೆರವೇರಿಸಿ ಗ್ರಾಮದ ದೇವರಿಗೆ ಹಣ್ಣು-ಕಾಯಿ ಅರ್ಪಿಸಿದರೆ ದೊಣ್ಣೆ ಭೂತಪ್ಪಗೆ ಹಣ್ಣು-ಕಾಯಿ, ಕುರಿ-ಕೋಳಿಗಳ ಬಲಿ ನೀಡಿದರೆ ವಡ್ಡರಭೂತಪ್ಪನಿಗೆ ಹಣ್ಣು-ಕಾಯಿಯೊಂದಿಗೆ 18 ಹಂದಿಗಳ ಬಲಿ ನೀಡಿ ಭಕ್ತಿ ಸಮರ್ಪಿಸಿದರು.
ಕೆಲವರು ತಮ್ಮ ಮನೆಯಲ್ಲಿ ಜಮೀನಿನಲ್ಲಿ ಹೀಗೆ ಯಾರಾದರು ತೊಂದರೆ ಮಾಡಿದರೆ ವಡ್ಡರ್ ಭೂತಪ್ಪನಿಗೆ ಇಲ್ಲವೇ ದೊಣ್ಣೆ ಭೂತಪ್ಪಗೆ ಹರಕೆ ಪ್ರಾರ್ಥನೆ ಮಾಡಿಕೊಂಡರೆ ಸಾಕು ಕೇವಲ ಆರೇಳು ತಿಂಗಳಲ್ಲಿ ಪತ್ತೆಯಾಗುವುದು ಎಂಬ ನಂಬಿಕೆಯೊಂದಿಗೆ ಹರಕೆ ಮಾಡಿಕೊಂಡು ಈಡೇರಿಸಿದ ಪರಿಣಾಮದಿಂದಾಗಿ ದೀಪಾವಳಿ ಅಮಾವಾಸ್ಯೆಗೆ ಮುನ್ನವೇ ಗ್ರಾಮ ದೇವರುಗಳಿಗೆ ಪೂಜೆ ಸಲ್ಲಿಸುವುದು ಇಲ್ಲಿನ ಮಲೆನಾಡಿ ರೈತಾಪಿ ವರ್ಗದವರ ವಿಶೇಷ ಹಬ್ಬವಾಗಿದೆ.
ಜಾತಿ, ಭೇದ-ಭಾವನೆಗಳಿಲ್ಲದೇ ಊರಿನವರಲ್ಲ ಸೇರಿಕೊಂಡು ಗ್ರಾಮದೇವರಿಗೆ ಲಿಂಗಾಯತ ಜನಾಂಗ ಮತ್ತು ಪರಿಶಿಷ್ಟ ವರ್ಗದವರು ಮತ್ತು ಮಡಿವಾಳ ಜನಾಂಗದವರುಗಳೇ ಪೂಜಿಸುವ ಸಂಪ್ರದಾಯದ ಪರಂಪರಾಗತವಾಗಿ ಈ ಪದ್ದತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಗ್ರಾಮಸ್ಥರು ವಿವರಿಸಿದರು.
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…