ಶಿಕ್ಷಣ ಸಚಿವರ ಸ್ವಾಗತಕ್ಕಾಗಿ ಬಿಸಿಲಲ್ಲಿ ಗಂಟೆ ಗಟ್ಟಲೆ ಕಾದುನಿಂತ ವಿದ್ಯಾರ್ಥಿಗಳು
ರಿಪ್ಪನ್ಪೇಟೆ: ಸುಮಾರು 2 ಕೋಟಿ ರೂ. ವೆಚ್ಚದ ಕರ್ನಾಟಕ ಪಬ್ಲಿಕ್ ಸ್ಕೂಲ್ ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಸ್ವಾಗತಕ್ಕಾಗಿ ಅಮೃತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸುಮಾರು 2 ಗಂಟೆಗೂ ಹೆಚ್ಚು ಕಾಲ ಬಿಸಿಲಿನಲ್ಲಿ ನಿಂತುಕೊಂಡು ಪ್ರಸಂಗ ನಡೆಯಿತು.
ಕಾರ್ಯಕ್ರಮ ನಿಗದಿಪಡಿಸಿದ ಸಮಯ ಬೆಳಗ್ಗೆ 9 ಗಂಟೆ ಎಂದಿದ್ದರೂ ಆದರೆ ಸಚಿವರು ಸಮೀಪದ ಬಿದರಹಳ್ಳಿ ಶಾಲೆಗೆ ಭೇಟಿ ನೀಡಿ ನಂತರ ಪಕ್ಷದ ಕಾರ್ಯಕರ್ತರ ಮನೆಗೆ ಹೋಗಿ ಬರುವುದು ವಿಳಂಬವಾಗಿದ್ದು ಮಕ್ಕಳು ಮಾತ್ರ ಬಿಸಿಲಿನಲ್ಲಿ ಗಂಟೆಗಟ್ಟಲೆೇ ಸಚಿವರ ಸ್ವಾಗತಕ್ಕಾಗಿ ಕಾದು ನಿಲ್ಲಬೇಕಾಯಿತು.