Categories: Sagara NewsShivamogga

ಸಾಗರದಲ್ಲಿ ಸಡಗರದಿಂದ ಸಂಪನ್ನಗೊಂಡ ಸಂವಿಧಾನ ಜಾಗೃತಿ ಐಕ್ಯತಾ ಜಾಥಾ

ಸಾಗರ: ಪ್ರವಾಸಿಗರ ಸ್ವರ್ಗ, ವಿಶ್ವ ಖ್ಯಾತಿಯ ಜೋಗ ಜಲಪಾತದ ನಾಡು, ಶ್ರೀಗಂಧದ ಕೆತ್ತನೆಯ ಪ್ರಸಿದ್ಧ ತಾಣ, ಐತಿಹಾಸಿಕ ಸಂಗ್ರಹಾಲಯವಿರುವ ಕೆಳದಿ, ಹೊಯ್ಸಳ ಶೈಲಿಯ ಕೆತ್ತನೆಯಿರುವ ಇಕ್ಕೇರಿ ಶರಾವತಿ ಹಿನ್ನಿರಿನ ಸುಂದರ ತಾಣ-ಹೊನ್ನೆಮರಡು, ಸಂಭ್ರಮದ ಮಾರಿಕಾಂಬ ಜಾತ್ರೆ ಉತ್ಸವ, ವರದಹಳ್ಳಿ, ಸಿಂಗಧೂರು, ಲಿಂಗನಮಕ್ಕಿ ಜಲಾಶಯ ಕೆ.ವಿ ಸುಬ್ಬಣ್ಣರವರು ಕಟ್ಟಿ-ಬೆಳಸಿದ ನೀನಾಸಂ, ಯಕ್ಷಗಾನ ಕಲಾ ಪ್ರಕಾರಗಳಿಗೆ ಪ್ರಸಿದ್ಧ ತಾಣ, ಅಡಿಕೆಯ ನಾಡು ಸಾಗರ.

ಹೀಗೆ ಭಾರತವನ್ನು ಕರ್ನಾಟಕದಲ್ಲಿ ನೋಡಬಹುದು ಎಂದಾದರೆ ಕರ್ನಾಟಕವನ್ನು ಸಾಗರದಲ್ಲೂ ನೋಡಬಹುದಾಗಿದೆ. ಇಂತಹ ವೈವಿಧ್ಯಮಯ ಐತಿಹ್ಯದ ಸಾಗರ ತಾಲ್ಲೂಕಿಗೆ ಸಂವಿಧಾನವನ್ನು ಪರಿಚಯಿಸುವ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮ “ಸಂವಿಧಾನ ಜಾಗೃತಿ ಜಾಥಾ” ಫೆಬ್ರವರಿ 05 ರಂದು ಪವಗೋಡು ಗ್ರಾಮ ಪಂಚಾಯಿತಿಯನ್ನು ಪ್ರವೇಶಿಸಿತು.

ಸಾಗರ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳಾದ ಸುರೇಶ್ ಸಹಾನೆ ಮತ್ತು ಇತರೆ ಅಧಿಕಾರಿಗಳು, ಸಿಬ್ಬಂದಿಗಳು ಪವಗೋಡು ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ವಿವಿಧ ಸ್ತ್ರೀ ಶಕ್ತಿ ಸಂಘಗಳಿಂದ ಆಗಮಿಸಿದ ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತ, ವಿದ್ಯಾರ್ಥಿಗಳಿಂದ ಜೈಕಾರ ಹಾಗೂ ರಾಜ ಬೀದಿ ಉತ್ಸವದೊಂದಿಗೆ ಚಲಿಸಿ ಜನಸಾಮಾನ್ಯರ ಅಭೂತ ಪೂರ್ವ ಸ್ವಾಗತದೊಂದಿಗೆ ಮುಂದುವರೆದು ಗ್ರಾಮ ಪಂಚಾಯಿತಿಗಳಾದ ನಾಡಕಲಸಿ, ಭೀಮನೇರಿ, ಕಲ್ಮನೆ, ಅವಿನಹಳ್ಳಿ, ತ್ಯಾಗರ್ತಿ ಹೊಸೂರು, ಯಡೇಹಳ್ಳಿ ಮಾಸೂರು, ಹಿರೆನಲ್ಲೂರು, ಉಳ್ಳೂರು, ಗೌತಮಪುರ ಹೀಗೆ ಎಲ್ಲಾ 38 ಪಂಚಾಯಿತಿಗಳಲ್ಲಿ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಸಂವಿಧಾನದ ಮೂಲ ಆಶಯಗಳನ್ನು ಹೊತ್ತ ಐಕ್ಯತ ಜಾಥಾ ಸಂಚರಿಸಿತು.

ಸಾಗರದ ಜನರ ಹೃದಯ ವೈಶಾಲ್ಯತೆ ಸಾಗರದಷ್ಟೇ ದೊಡ್ಡದು ಎನ್ನುವಂತೆ ಫೆಬ್ರವರಿ 05 ರಿಂದ 12 ರವರೆಗೆ ಒಟ್ಟು 07 ದಿನಗಳ ಕಾಲ ನಡೆದ ಜಾಥಾದಲ್ಲಿ ಪ್ರತಿ ಪಂಚಾಯಿತಿಗಳಲ್ಲಿ ಪೂರ್ಣ ಕುಂಭ ಸ್ವಾಗತ, ಎತ್ತಿನ ಗಾಡಿ, ಮೆರವಣಿಗೆ, ಬೈಕ್ ಆಟೋ ರ್ಯಾಲಿಗಳಲ್ಲಿ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಹಾಡು, ಕವನ ವಾಚನ, ನಾಟಕ ಪ್ರದರ್ಶನ, ಡೊಳ್ಳು ಕುಣಿತದೊಂದಿಗೆ ಜಾಥಾ ಕಾರ್ಯಕ್ರಮನ್ನು ಯಶಸ್ವಿಗೊಳಿಸಲಾಯಿತು.

ವಿಶ್ವದ ಅತ್ಯಂತ ವಿಸ್ತಾರ ಲಿಖಿತ ಸಂವಿಧಾನ ನಮ್ಮದು. ದೇಶದ ಪ್ರತಿ ಪ್ರಜೆಯು ಸಂವಿಧಾನದ ಚೌಕಟ್ಟಿನಲ್ಲಿ ಸಮಾನರು, ಹಲವಾರು ದೇಶದ ಸಂವಿಧಾನಗಳನ್ನು ಅಧ್ಯಯನ ನಡೆಸಿ ಜನತೆಯ ಸಾರ್ವಭೌಮತೆ, ಪ್ರಜಾತಾಂತ್ರಿಕ ಪ್ರಾಧ್ಯಾನ್ಯತೆ, ಕಠಿಣತೆ ಮತ್ತು ಮೃದುತ್ವದ ಸಮ್ಮಿಲನ, ಸಮಾಜವಾದ, ಜಾತ್ಯಾತೀತತೆ, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು ಹೀಗೆ ದೇಶದ ಸಂಸ್ಕೃತಿ ನಡೆ, ನುಡಿ ಜೀವನ ಶೈಲಿ ಅನುಗುಣವಾಗಿ ಸಂವಿಧಾನದ ಪ್ರತಿ ಕಲಂಗಳನ್ನು ರಚಿಸಲಾಗಿದೆ.

ಇಂತಹ ಸಂವಿಧಾನದ ಆಶಯಗಳನ್ನೊತ್ತ ಎರಡು ಟ್ಯಾಬ್ಲೋಗಳು ಸಾಗರದಾದ್ಯಂತ ಸಂಚರಿಸಿ ಸಂವಿಧಾನ ಮತ್ತು ಐಕ್ಯತಾ ಜಾಥಾ ನಡೆಸುತ್ತಾ ಹೊಸನಗರ ತಾಲ್ಲೂಕನ್ನು ಪ್ರವೇಶಿಸಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಯವರು ವಿದ್ಯಾರ್ಥಿಗಳು, ಸಮಾಜ ಕಲ್ಯಾಣ ಇಲಾಖೆ ಮತ್ತು ಇತರೆ ಇಲಾಖಾ ಅಧಿಕಾರಿಗಳ ಸಿಬ್ಬಂದಿಗಳ ಪರಿಶ್ರಮ ಮತ್ತು ಬದ್ಧತೆಯಿಂದ “ಸಂವಿಧಾನ ಜಾಗೃತಿ ಜಾಥಾವು ಸಾಗರದಲ್ಲಿ ಅತ್ಯಂತ ಯಶಸ್ವಿಯಾಗಿರುವುಕ್ಕೆ ಬಹಳ ಸಂತೋಷವಿದೆ ಹಾಗೂ ಸಾಗರ ತಾಲ್ಲೂಕಿನ ಸಮಸ್ತ ಜನತೆಗೆ ವಂದನೆಗಳನ್ನು ತಿಳಿಸುತ್ತಿದ್ದೇನೆ.
– ಮಲ್ಲೇಶಪ್ಪ.ಡಿ, ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

2 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

2 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

2 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

2 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

2 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

2 days ago