Ripponpet | ಕಾಡಾನೆ ಉಪಟಳಕ್ಕೆ ಬೇಸತ್ತ ರೈತರು !

ರಿಪ್ಪನ್‌ಪೇಟೆ: ಕೆಂಚನಾಲ (Kenchanala) ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಬೀಡುಬಿಟ್ಟಿರುವ ಕಾಡಾನೆಗಳ (Elephants) ಉಪಟಳಕ್ಕೆ ಈ ಭಾಗದ ರೈತರು (Farmers) ಹೈರಾಣಾಗಿದ್ದಾರೆ.


ಆಲವಳ್ಳಿ, ಮಾದಾಪುರ, ಕಲ್ಯಾಣಪುರ, ಕಮದೂರು ಗ್ರಾಮಗಳ ರೈತರ ಹೊಲ-ಗದ್ದೆಗಳಿಗೆ ನಿತ್ಯ ಆನೆಗಳು ನಿರಂತರ ದಾಳಿ ಮಾಡುತ್ತಿದ್ದು, ಈಗಾಗಲೇ ಮಲ್ಲಿಕಾರ್ಜುನ, ರಾಜೇಶ, ಕುಮಾರಗೌಡ, ಲಿಂಗಪ್ಪ, ಕೀರ್ತಿರಾಜ ಎಂಬ ರೈತರುಗಳ ಲಕ್ಷಾಂತರ ರೂಪಾಯಿಯ ಬೆಳೆಗಳನ್ನು ನಷ್ಟಗೊಳಿಸಿದ್ದು ಅಳಿದುಳಿದ ಬೆಳೆಯನ್ನು ಉಳಿಸಿಕೊಳ್ಳುವಲ್ಲಿ ರೈತರು ಅಸಹಾಯಕರಾಗಿದ್ದಾರೆ.

ರಾತ್ರಿಯಾಗುತ್ತಿದ್ದಂತೆ ಭತ್ತ, ಬಾಳೆ, ಶುಂಠಿ, ಕಬ್ಬು, ಅಡಿಕೆ, ಹೊಲ-ಗದ್ದೆಗಳಿಗೆ ನುಗ್ಗುತ್ತಿರುವ ಕಾಡಾನೆಗಳು ಒಂದಿಷ್ಟನ್ನು ತಿಂದು, ಉಳಿದ ಫಸಲನ್ನು ತುಳಿದು ನಾಶಗೊಳಿಸುತ್ತಿವೆ. ವರ್ಷಗಟ್ಟಲೇ ಕಷ್ಟಪಟ್ಟು ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲಾಗದೆ, ಆನೆಗಳನ್ನು ಓಡಿಸಲಾಗದೆ ಅಸಹಾಯಕರಾಗಿರುವ ರೈತರು ಅನಿವಾರ್ಯವಾಗಿ ಅರಣ್ಯ ಇಲಾಖೆಯ ಮೊರೆ ಹೋಗುತ್ತಿದ್ದಾರೆ.
ಇಲಾಖಾ ಸಿಬ್ಬಂದಿಗಳು ಸ್ಥಳಪರಿಶೀಲನೆ ನಡೆಸುವುದರೊಂದಿಗೆ ಆನೆಗಳನ್ನು ಬೇರೆಡೆ ಬೆನ್ನಟ್ಟುವ ಭರವಸೆಯನ್ನು ನೀಡುತ್ತಿದ್ದಾರೆ. ಚೋರಡಿ, ಅರಸಾಳು, ಮೂಗುಡ್ತಿ ಅರಣ್ಯ ವಲಯಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆಯೊಂದಿಗೆ ಆನೆಗಳ ಇರುವಿಕೆಯ ಪತ್ತೆ ಹಚ್ಚಲು ಕೊಂಬಿಂಗ್ ನಡೆಸುತ್ತಿದ್ದಾರೆ. ಆದರೆ ಮಂಗಳವಾರ ರಾತ್ರಿ ಈಟಿಕೆರೆ ರೈತ ಕೀರ್ತಿರಾಜ್‌ರವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಬಾಳೆ, ಅಡಿಕೆ ಮರಗಳನ್ನು ನಾಶಪಡಿಸಿರುವುದು ಬೆನ್ನಟ್ಟುವ ಕಾರ್ಯಾಚರಣೆಗೆ ಸವಾಲೆಸೆದಿವೆ.

ಹಗಲು ಹೊತ್ತಿನಲ್ಲಿ ಹೇಗೋ ಸಾವರಿಸಿಕೊಂಡು ದೈನಂದಿನ ವಹಿವಾಟು ನಡೆಸುತ್ತಿರುವ ರೈತರು ಸಂಜೆಯಾಗುತ್ತಿದ್ದಂತೆ ಆನೆಗಳ ದಾಳಿಯ ನೀರೀಕ್ಷೆಯಿಂದ ಆತಂಕಗೊಂಡು ಪಟಾಕಿ ಸಿಡಿಮದ್ದುಗಳನ್ನು ಸಿಡಿಸುವುದು, ಆಯಕಟ್ಟಿನ ಸ್ಥಳಗಳಲ್ಲಿ ಬೆಂಕಿ ಹಾಕಿಕೊಂಡು ಬೆಳೆಗಳ ಕಾವಲು ಮಾಡಿಕೊಳ್ಳುವುದೇ ಸಂಕಷ್ಟಕ್ಕೆ ಎಡೆಮಾಡಿದೆ.

ಅತಿಸೂಕ್ಷ್ಮ ಮತಿಯಾಗಿರುವ ಆನೆಯಿಂದ ಬೆಳೆ ಹಾಗೂ ಜೀವ ರಕ್ಷಣೆ ಮಾಡಿಕೊಳ್ಳುವುದು ರೈತರಿಗೆ ಅಪಾಯಕರವಾಗಿದ್ದು ಆಡಳಿತ ವರ್ಗ ಮತ್ತು ಇಲಾಖೆ ಅಧಿಕಾರಿಗಳು ಜನರ ನೆರವಿಗೆ ಧಾವಿಸಬೇಕಿದೆ.

“ಕಳೆದೊಂದು ವಾರದಿಂದ ಹಗಲು ರಾತ್ರಿಯೆನ್ನದೇ ಬೆಳೆಗಳ ಕಾವಲು ಮಾಡುತ್ತಿದ್ದೇವೆ. ಆದರೂ ಸಹಿತ ಹಲವು ರೈತರ ಬೆಳೆಗಳನ್ನು ಆನೆಗಳು ಧ್ವಂಸ ಮಾಡಿವೆ. ಬದುಕಿನ ಮೂಲಾಧಾರವಾಗಿರುವ ಬೆಳೆಗಳನ್ನು ಕಳೆದುಕೊಂಡು ಜೀವನ ಕಷ್ಟಕರವಾಗಿದೆ. ಇಲಾಖೆಯವರು ಜನರಿಗೆ ಪ್ರಾಣಹಾನಿಯಾಗುವ ಮೊದಲೆ ಎಚ್ಚೆತ್ತುಕೊಂಡು ಆನೆಗಳನ್ನು ಬೇರೆಡೆ ಸಾಗಿಸಲಿ, ಇಲ್ಲದಿದ್ದರೆ ಇನ್ನೊಂದೆರಡು ದಿನಗಳಲ್ಲಿ ಈ ಭಾಗದ ಸಾರ್ವಜನಿಕರೊಂದಿಗೆ ಅರಣ್ಯ ಇಲಾಖೆ ಕಚೇರಿ ಎದುರು ಧರಣಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ”.
– ಕೀರ್ತಿರಾಜ್, ಬೆಳೆ ಹಾನಿಯಾದ ರೈತ

“ಚೋರಡಿ, ಮೂಗುಡ್ತಿ, ಅರಸಾಳು ವಲಯ ಅರಣ್ಯಾಧಿಕಾರಿಗಳು ಆನೆಯನ್ನು ಹಿಮ್ಮೆಟ್ಟಿಸುವ ಜಂಟಿ ಕಾರ್ಯಾಚರಣೆ ಮಾಡುತ್ತಿದ್ದೇವೆ. ಹಾಗೂ ದ್ರೋಣ್ ಕ್ಯಾಮೆರಾದ ಮೂಲಕ ಆನೆಗಳ ಜಾಡನ್ನು ಪತ್ತೆ ಹಚ್ಚುವ ಕಾರ್ಯವೂ ಸಾಗಿದೆ. ಕಾಡಿನಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ. ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿ ಶೀಘ್ರದಲ್ಲಿಯೇ ಆನೆಗಳನ್ನು ಹಿಮ್ಮೆಟ್ಟಿಸುತ್ತೇವೆ”.
– ಬಾಬು ರಾಜೇಂದ್ರ ಪ್ರಸಾದ್, ಅರಸಾಳು ಆರ್‌ಎಫ್‌ಓ


ರಿಪ್ಪನ್‌ಪೇಟೆಯಲ್ಲಿ ಡಿ. 8 ರಂದು ಗ್ರಾಮಸಭೆ
ರಿಪ್ಪನ್‌ಪೇಟೆ: ಪಟ್ಟಣದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಡಿ. 8 ರ ಶುಕ್ರವಾರ 11 ಗಂಟೆಗೆ ಗ್ರಾ.ಪಂ.ಅಧ್ಯಕ್ಷೆ ಧನಲಕ್ಷ್ಮಿ ರವರ ಅಧ್ಯಕ್ಷತೆಯಲ್ಲಿ ಹೊಸನಗರ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪುಟ್ಟನಾಯ್ಕ ಉಪಸ್ಥಿತಿಯಲ್ಲಿ ಗ್ರಾಮಸಭೆ ನಡೆಸಲಾಗುವುದೆಂದು ಪಿಡಿಒ ಮಧುಸೂದನ್ ಪ್ರಕರಣೆಯಲ್ಲಿ ತಿಳಿಸಿದ್ದಾರೆ.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

3 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

3 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

3 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

3 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

3 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

4 days ago