ಅಕ್ರಮ ಮರಳು ಸಾಗಾಟದ ವಿರುದ್ಧ ಡಿಸಿ ಕಚೇರಿ ಮುಂದೆ ನಾಳೆ ಏಕಾಂಗಿ ಮೌನ ಪ್ರತಿಭಟನೆ ; ಗಿರೀಶ್ ಆಚಾರ್

Written by Mahesh Hindlemane

Published on:

ಹೊಸನಗರ ; ಅಕ್ರಮವಾಗಿ ಮರಳು ಸಂಗ್ರಹ ಮತ್ತು ಸಾಗಾಟದ ವಿರುದ್ಧ ಜೂ.16 ರಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಶಾಂತಿಯುತವಾದ ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸುವುದಾಗಿ ಹೊಸನಗರ ಜನಸಂಗ್ರಾಮ ಪರಿಷತ್ತಿನ ಗಿರೀಶ್ ಆಚಾರ್ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಹೊಸನಗರ ತಾಲೂಕಿನಲ್ಲಿ ಶರಾವತಿ ನದಿಯಿಂದ ಅಕ್ರಮವಾಗಿ ನೂರಾರು ಲೋಡ್ ಮರಳು ಸಂಗ್ರಹ ಮತ್ತು ಸಾಗಾಟ ನಡೆಯುತ್ತಿರುವ ಬಗ್ಗೆ ಸಾಕಷ್ಟು ಬಾರಿ ಇಲ್ಲಿನ ತಾಲೂಕು ಆಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಪಶ್ಚಿಮ ಘಟ್ಟ ಹಾಳಾಗುವುದಲ್ಲದೆ ನದಿ ಮೂಲ ಹಾಳಾಗುತ್ತಿದೆ ಹಾಗು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ.ಗಳು ನಷ್ಟವಾಗುತ್ತಿದೆ. ಇದರ ವಿರುದ್ಧ ಜೂ. 16 ರಂದು ಬೆಳಗ್ಗೆ 10:30 ರಿಂದ ಡಿಸಿ ಕಚೇರಿ ಮುಂದೆ ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸುವುದಾಗಿ ಗಿರೀಶ್ ಆಚಾರ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

రంగుతోన్న జిల్ల~ నిరింగర రఘర్రియ ముంబాగ చరాంగియాగి చితాన శ్రీరిభతని తండుదారి నిర్ణయినీస్టు కాత్రుగరు నాన్న మంత రియంవాది శ్రీతిభ బసిని నాడతీలిచే బాలేది అవండి

2008

Leave a Comment