ರಿಪ್ಪನ್ಪೇಟೆ : ಇಲ್ಲಿನ ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಇಂದು ಪ್ರಧಾನಮಂತ್ರಿ ಮೋದಿಯವರ 76ನೇ ಜನ್ಮದಿನದ ಅಂಗವಾಗಿ ರಿಪ್ಪನ್ಪೇಟೆ ಕೆರೆಹಳ್ಳಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರು ಮತ್ತು ಅಭಿಮಾನಿಗಳೊಂದಿಗೆ ಮೋದಿಯವರ ಸೇವಾ ಸಂಕಲ್ಪ ಅಭಿಯಾನದಡಿ ವಿಶೇಷ ಪೂಜೆ ಸಲ್ಲಿಸಿ ಶುಭಕೋರಲಾಯಿತು.
ಈ ಸಂದರ್ಭದಲ್ಲಿ ದೇಶದ ಪ್ರಧಾನ ಮಂತ್ರಿ ಮೋದಿಯವರಿಗೆ ಇನ್ನೂ ಭಗವಂತ ದೇಶದ ಸೇವೆಯಲ್ಲಿ ತೊಡಗಲು ಆಯುಷ್ಯ, ಆರೋಗ್ಯ ಕರುಣಿಸಲೆಂದು ವಿಘ್ನನಿವಾರಕನಲ್ಲಿ ಸಂಕಲ್ಪಿಸಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುಂದರೇಶ್, ಕಾರ್ಯದರ್ಶಿ ಜಿ.ಡಿ.ಮಲ್ಲಿಕಾರ್ಜುನ, ಆರ್.ಟಿ.ಗೋಪಾಲ, ಎಂ.ಬಿ.ಮಂಜುನಾಥ, ಎಂ.ಸುರೇಶಸಿಂಗ್, ಮಂಜುಳಾಂಕೇತಾರ್ಜಿರಾವ್, ಪದ್ಮಾ ಸುರೇಶ್, ಯೋಗೇಂದ್ರಗೌಡ ತರಕಾರಿ, ರಾಜೇಶ್ ಬುಕ್ಕಿವರೆ, ಆರ್.ರಾಘವೇಂದ್ರ, ನಾಗರತ್ನ ದೇವರಾಜ್, ಪಿ. ಸುಧೀರ್, ರಾಮಚಂದ್ರ ಬಳೆಗಾರ್, ದೇವೇಂದ್ರಪ್ಪಗೌಡ, ರಾಮಚಂದ್ರ, ರೇಖಾ ರವಿ, ಲಿಂಗಪ್ಪ, ಸೀತಾ, ಗೀತಾ, ಕುಷನ್ ದೇವರಾಜ್, ಜಿ.ಆರ್.ಮಂಜು, ಕೆ.ಬಿ.ಹೂವಪ್ಪ, ಗಣೇಶ, ರಾಮು ಇನ್ನಿತರ ಕಾರ್ಯಕರ್ತರು ಹಾಜರಿದ್ದರು.

