ಏ. 21ರಂದು ನಾಗರಹಳ್ಳಿಯಲ್ಲಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಟಾಪನಾ ವರ್ಧಂತ್ಯುತ್ಸವ ಮತ್ತು ಶಂಕರಾಚಾರ್ಯರ ಜಯಂತ್ಯೋತ್ಸವ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್ 21 ರಂದು ಮಂಗಳವಾರ ಶ್ರೀನಾಗೇಂದ್ರಸ್ವಾಮಿಯ 15ನೇ ವರ್ಷದ  ಪ್ರತಿಷ್ಟಾಪನಾ ವರ್ಧಂತ್ಯುತ್ಸವ ಮತ್ತು ಶಂಕರಾಚಾರ್ಯರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಧ್ಯಕ್ಷ ಗೇರುಗಲ್ಲು ಸತೀಶ್ ಭಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಏಪ್ರಿಲ್ 21 ರಂದು ಮಂಗಳವಾರ ಶ್ರೀನಾಗೇಂದ್ರಸ್ವಾಮಿಯ 15ನೇ ವರ್ಷದ  ಪ್ರತಿಷ್ಟಾಪನಾ ವರ್ಧಂತಿ ಉತ್ಸವ ಅಂಗವಾಗಿ ಶ್ರೀಸ್ವಾಮಿಗೆ ಮೂಲಮಂತ್ರ ಹೋಮ ಪಂಚವಿಂಶತಿ ಕಲಶಾಭಿಷೇಕ ವಿಶೇಷ ಪೂಜೆ ನಂತರ ಜಗದ್ಗುರು  ಶಂಕರಾಚಾರ್ಯರ ಜಯಂತ್ಯೋತ್ಸವ ಕಾರ್ಯಕ್ರಮ ನಂತರ ವಿಶೇಷ ಪೂಜೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ ಸಾಮೂಹಿಕ ಆನ್ನ ಸಂತರ್ಪಣೆ ನಡೆಯಲಿದೆ ಎಂದು ಗೇರುಗಲ್ಲು ಸತೀಶ್ ಭಟ್ ತಿಳಿಸಿದ್ದಾರೆ.

Leave a Comment