Ripponpete

ಮುಚ್ಚುವ ಹಂತದಲ್ಲಿದ್ದ ಶಾಲೆ ಉಳಿಸಿದ ಕೀರ್ತಿ ಶಿಕ್ಷಕ, ಪೋಷಕರದ್ದು ; ಬಿಇಒ ಕೃಷ್ಣಮೂರ್ತಿ

ರಿಪ್ಪನ್‌ಪೇಟೆ ; ಹೊನ್ನೆಬೈಲು ಸರ್ಕಾರಿ ಶಾಲೆಯ ಮಕ್ಕಳಿಲ್ಲದೆ ಮುಚ್ಚುವ ಹಂತದಲ್ಲಿದ್ದು ನಮ್ಮ ಶಿಕ್ಷಕರು ಊರಿನಲ್ಲಿ ಸಮೀಕ್ಷೆ ನಡೆಸುವ ಮೂಲಕ ಪೋಷಕರ ಮನವೊಲಿಸಿ ಮಕ್ಕಳನ್ನು ದಾಖಲಿಸಿ ಶಾಲೆಯ ಪ್ರಗತಿಗೆ ಹಗಲಿರುಳು ಶ್ರಮಿಸಿ ಶಾಲೆಯ ಪ್ರಗತಿಗೆ ಕಾರಣರಾಗಿದ್ದಾರೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ ಶಿಕ್ಷಕರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹುಂಚ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊನ್ನೆಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತ್ತು ಅಂಗನವಾಡಿಯ ಚಿಣ್ಣರ ಸಾಂಸ್ಕೃತಿಕ ಸಿಹಿ ಸಿಂಚನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನಲಿ-ಕಲಿ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಭೌತಿಕ ಹಾಗೂ ಬೌದ್ದಿಕ ವಾತಾವರಣಕ್ಕೆ ಶಿಕ್ಷಕರು ಕ್ರಿಯಾಶೀಲತೆ ಕಾರಣ. ಮಕ್ಕಳ ಕಲಿಕೆಯು ಉತ್ತಮವಾಗಿಸಲು ಶಿಕ್ಷಕರ ಪರಿಶ್ರಮವೇ ಸಾಕ್ಷಿಯಾಗಿದೆ ಎಂದು ಹೇಳಿ, ಅಕ್ಷರ ಅಲಂಕಾರಗಳಿಂದ ಬಣ್ಣ ಬಣ್ಣದ ವರ್ಣರಂಜಿತ ಗೋಡೆ ಬರಹದಿಂದ ಕೂಡಿದ ಕೊಠಡಿಯಲ್ಲಿನ ಚಿತ್ರಪಟಗಳು ಮಕ್ಕಳಿಗೆ ಕುಳಿತು ಕೊಳ್ಳಲು ಅಸನದ ವ್ಯವಸ್ಥೆಗಳ ನಲಿಕಲಿ ಕೊಠಡಿಯನ್ನು ಕುರಿತು ಶಿಕ್ಷಕರ ಕ್ರಿಯಾಶೀಲತೆ ಕಾರ್ಯದಕ್ಷತೆಯನ್ನು ಪ್ರಶಂಸಿ ಈ ಎಲ್ಲ ಶಾಲಾ ಚಟುವಟಿಕೆಗೆ ನವೋತ್ಸಾಹಿ ಹಳೆ ವಿದ್ಯಾರ್ಥಿಗಳ ಮತ್ತು ಅಕ್ಕ-ಪಕ್ಕ ಗ್ರಾಮಗಳ ಗ್ರಾಮಸ್ಥರ ಸಹಕಾರದಿಂದ ಶಿಕ್ಷಕವರ್ಗ ಪೋಷಕರೊಂದಿಗಿನ ಒಡನಾಟವೇ ಈ ಶಾಲೆ ಅಭಿವೃದ್ದಿ ಹೊಂದಲು ಕಾರಣವಾಗಿದೆ ಎಂದರು.

ಶಾಲಾ ವಾರ್ಷಿಕೋತ್ಸವ ಮತ್ತು ಚಿಣ್ಣರ ಸಾಂಸ್ಕೃತಿಕ ಸಿಹಿ ಸಿಂಚನ ಕಾರ್ಯಕ್ರಮವನ್ನು ಹುಂಚ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಂಗಳ ದೇವರಾಜ್ ಉದ್ಘಾಟಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ಎಸ್.ಡಿ.ಎಂ.ಸಿ.ಆದ್ಯಕ್ಷ ಸುಧಾಕರ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಪ್ರಾಚಾರ್ಯ ಶಾಂತಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಇಸಿಓ ಕರಿಬಸಪ್ಪ, ಶಿವಪ್ಪ, ಎಸ್.ಡಿ.ಎಂ.ಸಿ. ಸಮಿತಿ ಪದಾಧಿಕಾರಿಗಳು ಮಾಜಿ ಸೈನಿಕರು ಮತ್ತು ರೈತರು ಶಾಲಾ ಮಕ್ಕಳ ಪೋಷಕವರ್ಗ ಹಳೆ ವಿದ್ಯಾರ್ಥಿ ಸಮೂಹ ಹಾಜರಿದ್ದರು.

ಶಾಲೆಯ ವಾರ್ಷಿಕೋತ್ಸವ ಯಶಸ್ವಿಗೆ ತನು, ಮನ, ಧನವನ್ನು ನೀಡುವ ಮೂಲಕ ಸಹಕರಿಸಿದ ಅಕ್ಕಪಕ್ಕದ ಮತ್ತು ಹೊನ್ನೆಬೈಲು ಗ್ರಾಮಗಳ ಗ್ರಾಮಸ್ಥರು ಪೋಷಕವರ್ಗ ಶಾಲಾ ಶಿಕ್ಷಕ ವೃಂದ ಅಭಿನಂದಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಸ್ವಾಗತಿಸಿದರು. ಸಿ.ಆರ್.ಪಿ. ದೀಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕ ಕುಮಾರಸ್ವಾಮಿ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ಮಾನಸ ವಂದಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಮತ್ತು ಅಂಗನವಾಡಿ ಮಕ್ಕಳಿಂದ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>