ರಿಪ್ಪನ್ಪೇಟೆ ; ವಿದ್ಯೆ, ಶೀಲಾ, ವ್ಯಕ್ತಿತ್ವ ವಿಕಸನ ಈ ಮೂರು ಗುಣಗಳೇ ತ್ರಿವಿಧ ದಾಸೋಹಗಳಾಗಿವೆ. ಅಕ್ಷರಸ್ಥರೆ ಹೆಚ್ಚ ಅವಿಧ್ಯಾವಂತರಾಗುತ್ತಿದ್ದಾರೆ. ಆದರೆ ಅನಕ್ಷರಸ್ಥರೆ ವಿದ್ಯಾವಂತರಿಗಿಂತ ಹೆಚ್ಚು ಪ್ರಜ್ಞೆ ಉಳವರಾಗಿದ್ದಾರೆಂದು ನಿಕಟ ಪೂರ್ವ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಡಾ. ಶಾಂತಾರಾಮ ಪ್ರಭು ಹೇಳಿದರು.
ಅವರು ರಿಪ್ಪನ್ಪೇಟೆಯ ಗ್ರಾಮ ಪಂಚಾಯಿತ್ ಸಭಾಭವನದಲ್ಲಿ ಡಾ.ಶಿವಕುಮಾರ ಮಹಾಸ್ವಾಮಿಗಳ ಆಭಿಮಾನಿಗಳ ಬಳಗದವರು ಆಯೋಜಿಸಲಾದ ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಕಾಯಕಯೋಗಿ ಡಾ. ಶಿವಕುಮಾರ ಮಹಾಸ್ವಾಮೀಜಿಯವರ 119ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಅನ್ನ ದಾನಂ ಪರಂ ದಾನಂ ಪ್ರತಿಯೊಂದು ಜೀವಿಯು ಬದುಕಿಗಾಗಿ ತಿನ್ನುವ ಆಹಾರವೇ ಅನ್ನ ಸ್ವರೂಪವಾಗಿದೆ. ವಿದ್ಯಾದಾನ ದೊಡ್ಡದು ಅನ್ನದಿಂದ ಕ್ಷಣ ಕಾಲ ತೃಪ್ತಿ ದೊರೆತರೆ ಜೀವನ ಪೂರ್ತಿ ಬದುಕು ನೀಡುವುದು ಶಿಕ್ಷಣ. ಆದರೆ ಇಂದು ಅಕ್ಷರ ಜ್ಞಾನವಿಲ್ಲದ ಅನಕ್ಷರಸ್ಥರು ಕೂಡಾ ವಿದ್ಯಾವಂತರಾಗಿದ್ದಾರೆ. ವರ್ತಮಾನದ ಕಾಲಘಟ್ಟದಲ್ಲಿ ಅಕ್ಷರ ಜ್ಞಾನ ಪಡೆದವರೇ ಅವಿದ್ಯಾವಂತರಾಗಿ ಹೊರ ಹೊಮ್ಮತ್ತಿರುವುದು ಖೇದಕರ ಸಂಗತಿಯೆಂದರು.
ಲೇಖನವನ್ನು ಮುಂದುವರಿಸಿ ಓದಿ
ಗಾಂಧಿ ತತ್ವ ಸಿದ್ದಾಂತ ಇಲ್ಲದ ರಾಜಕಾರಣ ಮಹಾಪಾಪ. ಶೀಲವಿಲ್ಲದ ಶಿಕ್ಷಣ ಶೋಭೆ ತರದು ಸಂಸ್ಕಾರಯುವ ಶೀಲವಂತ ಸಂಪೂರ್ಣ ವ್ಯಕ್ತಿತ್ವ ರೂಪಿಸುವ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದರು. ಜಾತಿ ನಾಲ್ಕು ಗೊಡೆಗಳ ಮಧ್ಯ ಸೀಮಿತವಾಗಿರಲ್ಲಿ ದಾರ್ಶನಿಕರನ್ನು ಜಾತಿ ಪಟ್ಟಕ್ಕೆ ಎಳೆ ತರುವುದು ತರವಲ್ಲ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಡಾ.ಶಿವಕುಮಾರ ಮಹಾಸ್ವಾಮಿಗಳ ಅಭಿಮಾನಿಗಳ ಬಳಗದ ಸಂಚಾಲಕ ಕಗ್ಗಲಿ ಲಿಂಗಪ್ಪ ವಹಿಸಿದ್ದರು.
ಪಿಎಸ್ಐ ರಾಜುರೆಡ್ಡಿ ಸಮಾರಂಭವನ್ನು ಉದ್ಘಾಟಿಸಿದರು. ಅಖಿಲಭಾರತ ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಎಂ.ಎಸ್.ಉಮೇಶ್ ಮುಖ್ಯ ಆತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನಾಗರತ್ನ ದೇವರಾಜ್ ಪ್ರಾರ್ಥಿಸಿದರು. ದೂನ ಸೋಮಶೇಖರ (ರಾಜು) ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ನಿರೂಪಿಸಿದರು. ಪದ್ಮಾ ಸುರೇಶ ವಂದಿಸಿದರು.

