Ripponpete

ನಿತ್ಯ ನಿರಂತರ ಭಕ್ತರಿಂದ ಜಿನಾರಾಧನೆ | ಹೊಂಬುಜ ಕ್ಷೇತ್ರದ ಮಹಿಮೆ ಅಪಾರ ; ಶ್ರೀಗಳು

RIPPONPETE ; ಅತಿಶಯ ಶ್ರೀಕ್ಷೇತ್ರ ಹೊಂಬುಜದ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಅಭೀಷ್ಠವರಪ್ರದಾಯಿನಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯ ಮಹಿಮೆ ಅಪಾರವಾದುದು. ಇಲ್ಲಿಯ ಗುರುಕುಲ ಶ್ರೀ ಕುಂದಕುಂದ ವಿದ್ಯಾಪೀಠದಲ್ಲಿ ಜ್ಞಾನಾರ್ಜನೆಗೈದವರು ಉನ್ನತ ಪದವಿಯಲ್ಲಿ ಸೇವೆ ಸಲ್ಲಿಸುವಂತಾದರು ಎಂದು ಕಂಬದಹಳ್ಳಿ ಶ್ರೀ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ತಮಗೆ ಸಮರ್ಪಿಸಿದ ಗುರುಭಕ್ತಿ ಪ್ರತೀಕ ಅಭಿನಂದನಾ ಗೌರವ ಸ್ವೀಕರಿಸಿ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ  ಆಯೋಜಿಸಲಾಗಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ, ಆಧ್ಯಾತ್ಮ ಚಿಂತನ ಮಂಥನಕ್ಕೆ ಯೋಗ್ಯ ಪುಣ್ಯಸ್ಥಳವಾಗಿದ್ದು, ಭಕ್ತರು ನಿತ್ಯ ನಿರಂತರ ಜಿನಾರಾಧನೆಯ ಮೂಲಕ ನವಚೈತನ್ಯ ಪಡೆಯುತ್ತಾರೆಂದು ಹೇಳುತ್ತಾ, ಇಂದ್ರಧ್ವಜ ವಿಧಾನ ವಿಶಿಷ್ಟ ಆರಾಧನೆಯಾಗಿದ್ದು, ಜೈನ ಧರ್ಮದ ಉಪದೇಶಗಳು ಸುಗಮ ಜೀವನಕ್ಕೆ ಸೋಪಾನ ಎಂದು ಪ್ರವಚನವಿತ್ತ ಅವರು ಇಪ್ಪತ್ತೈದು ಸಂವತ್ಸರಗಳನ್ನು ಶ್ರೀಕ್ಷೇತ್ರ ಕಂಬದಹಳ್ಳಿ ಶ್ರೀಮಠದ ಪೀಠಾಧೀಶರಾಗಿ ಯಶಸ್ವಿಯಾಗಿ ಧಾರ್ಮಿಕ ಸೇವೆಯ ಸಮರ್ಪಿಸಿಕೊಂಡ ಪರಮಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರನ್ನು ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು “ಜೈನ ವಿದ್ಯಾಭೂಷಣ” ಎಂಬ ಗೌರವ ಪ್ರಶಸ್ತಿಯನ್ನು ನೀಡಿ ಅಭಿನಂದನೆ ಸಲ್ಲಿಸಿದರು.

ಕಂಬದಹಳ್ಳಿಯ ಪ್ರಾಚೀನ ಜಿನಾಲಯಗಳ ಸಂರಕ್ಷಣೆ, ಜೀರ್ಣೋದ್ಧಾರ ಹಾಗೂ ಗುರುಕುಲದ ಮೂಲಕ ವಿದ್ಯಾರ್ಜನೆ ಮಾಡುವ ಅವಕಾಶ ಕಲ್ಪಿಸಿರುವ ಶ್ರೀಗಳು ಎಲ್ಲ ಭಟ್ಟಾರಕರಿಗೆ ಆದರ್ಶಪ್ರಾಯರು ಎಂಬ ಗೌರವ ನುಡಿಗಳನ್ನು ಹೇಳಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ಇಂದ್ರಧ್ವಜ ವಿಧಾನದಲ್ಲಿ ಆರ್ಯಿಕಾರತ್ನ ಶ್ರೀ 105 ಶಿವಮತಿ ಮಾತಾಜಿ, ಆರ್ಯಿಕಾ ಶ್ರೀ 105 ಪದ್ಮಶ್ರೀ ಮಾತಾಜಿ ದಿವ್ಯ ಉಪಸ್ಥಿತಿಯಲ್ಲಿ ಆರಂಭಗೊಂಡವು. ಸೋಂದಾ ಶ್ರೀ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿ, ಸಿಂಹನಗದ್ದೆ ಶ್ರೀ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಮಹಾಸ್ವಾಮೀಜಿ, ನಾಂದನಿ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಜಿನಸೇನಾ ಭಟ್ಟಾರಕ ಮಹಾಸ್ವಾಮೀಜಿಯವರು ತಮ್ಮ ಪ್ರವಚನದಲ್ಲಿ ಆರಾಧನೆಯ ಮಹತ್ವವನ್ನು ತಿಳಿಸಿದರು.

ಮಾಜಿ ಸಚಿವ ಶಾಸಕ ಆರಗ ಜ್ಞಾನೇಂದ್ರರವರು ಶ್ರೀಕ್ಷೇತ್ರದ ಶ್ರೀ ಪದ್ಮಾವತಿ ದರ್ಶನ ಪಡೆದು ಇಂದ್ರಧ್ವಜ ವಿಧಾನ ವೀಕ್ಷಿಸಿದರು. ಶ್ರೀಗಳವರು ಆಶೀರ್ವದಿಸಿ ಹರಸಿದರು.

ಇಂದ್ರಧ್ವಜ ವಿಧಾನ ವಿವರವುಳ್ಳ ಕೃತಿಯನ್ನು (ಸಿದ್ಧಾಂತಕೀರ್ತಿ ಪ್ರಕಾಶನದಿಂದ ಪ್ರಕಟಿತ) ಲೋಕಾರ್ಪಣೆಗೊಳಿಸಲಾಯಿತು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>