ರಿಪ್ಪನ್ಪೇಟೆ ; ಇಲ್ಲಿನ ಆಟೋ ಸಂಘದವರು ಹಿರಿಯ ಆಟೋ ಚಾಲಕ ದ್ಯಾವಪ್ಪಗೌಡರ ಪ್ರಮಾಣಿಕ ಸೇವೆಯನ್ನು ಗುರುತಿಸಿ ಸನ್ಮಾನಿ ಗೌರವಿಸಿದರು.
ತಮ್ಮ ಸೇವಾವಧಿಯಲ್ಲಿ ಕಾಯಕವೇ ಕೈಲಾಸ ಎಂಬ ತತ್ವ ಸಿದ್ದಾಂತಕ್ಕೆ ಕಟ್ಟಿಬದ್ದರಾಗಿರುವ ದ್ಯಾವಪ್ಪಗೌಡರು ತಮ್ಮ ನಿತ್ಯ ಕಾಯಕವನ್ನು ಮಳೆ, ಗಾಳಿ ಚಳಿ ಬಿಸಿಲು ಎನ್ನದೇ ಮುಂಜಾನೆ 4 ಗಂಟೆಗೆ ಆಟೋ ರಿಕ್ಷಾವನ್ನು ತಂದು ನಿಲ್ದಾಣದಲ್ಲಿ ನಿಲ್ಲಿಸಿ ತಮ್ಮ ಇಳಿ ವಯಸ್ಸಿನಲ್ಲೂ ಹಿರಿಯ ಚೇತನ ದ್ಯಾವಪ್ಪಗೌಡರ ವೃತ್ತಿಯನ್ನು ಆರಂಭಿಸುವುದು ಇಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.
ಇವರ ಸೇವಾ ವೃತ್ತಿಯಲ್ಲಿ ನೆಮ್ಮದಿಯನ್ನು ಕಾಣಲಾಗದಿದ್ದರೂ ಕೂಡಾ ಕಾಯಕ ವೃತ್ತಿಯನ್ನು ಈ ಇಳಿ ವಯಸ್ಸಿನಲ್ಲೂ ದುಡಿದು ತಿನ್ನುವ ಕಾರ್ಯದಲ್ಲಿ ಮಾದರಿಯಾಗಿದ್ದಾರೆ.

