Post Office Scheme: ಅಂಚೆ ಕಚೇರಿಗಳಲ್ಲಿ ಈಗ ನಿಮ್ಮ ಭವಿಷ್ಯವನ್ನು ಭದ್ರಗೊಳಿಸುವ ಶ್ರೇಷ್ಠ ಅವಕಾಶವಿದೆ. ಕೇವಲ ₹50 ಪ್ರಾರಂಭಿಕ ಹೂಡಿಕೆಯಿಂದ ನಿವೃತ್ತಿ ಸಮಯದಲ್ಲಿ ನೀವು ₹30 ಲಕ್ಷವರೆಗೆ ಲಾಭ ಪಡೆಯಬಹುದಾದ “ಗ್ರಾಮ ಸುರಕ್ಷಾ ಯೋಜನೆ” ಎಂಬ ಅಚ್ಚರಿಯ ಯೋಜನೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಈ ಯೋಜನೆಯನ್ನು ಭಾರತ ಸರ್ಕಾರವು ಗ್ರಾಮೀಣ ಪ್ರದೇಶದ ಜನರಿಗೆ ಉದ್ದೇಶಿಸಿ ಪರಿಚಯಿಸಿದ್ದು, ಕಡಿಮೆ ಹೂಡಿಕೆಯಿಂದ ಹೆಚ್ಚಿನ ಲಾಭ ಪಡೆಯುವ ಅವಕಾಶವಿದೆ. ಈ ಯೋಜನೆ ಮಕ್ಕಳ ವಿದ್ಯಾಭ್ಯಾಸ, ಮದುವೆ ಅಥವಾ ನಿವೃತ್ತಿ ಪಿಂಚಣಿಗಾಗಿ ತುಂಬಾ ಲಾಭದಾಯಕವಾಗಿದೆ.
ಯೋಜನೆಯ ಪ್ರಮುಖ ಅಂಶಗಳು:
- ಹೂಡಿಕೆಗೆ ಪ್ರಾರಂಭಿಕ ಮೊತ್ತ: ಕೇವಲ ₹50 ರಿಂದ ₹150 ತನಕ.
- ಈ ಮೊತ್ತ ವಯಸ್ಸು ಮತ್ತು ನಿವೃತ್ತಿ ಗುರಿಯನ್ನು ಆಧರಿಸಿ ಬದಲಾಗುತ್ತದೆ.
- 25 ವರ್ಷದ ವ್ಯಕ್ತಿ 60ನೇ ವರ್ಷದಲ್ಲಿ ₹2 ಲಕ್ಷ ವಿಮಾ ಲಾಭ ಪಡೆಯಲು ಪ್ರತಿ ತಿಂಗಳು ₹400-₹450 ಪಾವತಿಸಬೇಕಾಗುತ್ತದೆ.
- ಯೋಜನೆಯ ನಿವೃತ್ತಿ ವಯಸ್ಸು: 55 ರಿಂದ 60 ವರ್ಷಗಳ ನಡುವಿನ ಯಾವುದೇ ವಯಸ್ಸನ್ನು ಆಯ್ಕೆ ಮಾಡಬಹುದು.
- ನಿವೃತ್ತಿಯಾದ ಮೇಲೆ ನಿಯಮಿತ ಪಿಂಚಣಿ ಲಭ್ಯವಿರುತ್ತದೆ.
- ಈ ಯೋಜನೆ ಅಂಚೆ ಕಚೇರಿಗಳಲ್ಲಿ ಲಭ್ಯವಿದ್ದು, ಸರಳ ದಾಖಲೆ ಮತ್ತು ಪ್ರಕ್ರಿಯೆಯಿಂದ ಸುಲಭವಾಗಿ ಸೇರಿಸಿಕೊಳ್ಳಬಹುದು.
ಯಾರು ಸೇರ್ಪಡೆಗೊಳ್ಳಬಹುದು?
ಹೆಚ್ಚಿನ ಆದಾಯವಿಲ್ಲದವರಿಂದ ಹಿಡಿದು ಮಧ್ಯಮ ವರ್ಗದವರು ಸೇರಿದಂತೆ ಎಲ್ಲರೂ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಗ್ರಾಮೀಣ ಭಾಗದ ಜನತೆಗೆ ಇದೊಂದು ನಿಜವಾದ ಭದ್ರತಾ ಜಾಲವಾಗಿ ಪರಿಣಮಿಸಲಿದೆ.
ಕಡಿಮೆ ಹೂಡಿಕೆಯೊಂದಿಗೆ ಭವಿಷ್ಯವನ್ನು ಭದ್ರಗೊಳಿಸಲು ನೀವು ಹುಡುಕುತ್ತಿದ್ದೀರಾ? ಹಾಗಾದ್ರೆ ಈ ಯೋಜನೆಯಿಂದ ಒಳ್ಳೆಯ ಅವಕಾಶಗಳನ್ನ ಪಡೆದುಕೊಳ್ಳಿ. ಈಗಲೇ ಅಂಚೆ ಕಚೇರಿಗೆ ಭೇಟಿ ನೀಡಿ ಅಥವಾ ಅಧಿಕೃತ ವೆಬ್ಸೈಟ್ ಮೂಲಕ ಮಾಹಿತಿ ಪಡೆಯಿರಿ.
ಮರಣದ ನಂತರ ನಾಮಿನಿಗೆ ಸಂಪೂರ್ಣ ಹಣ!
ಈ ಯೋಜನೆಯ ಮುಖ್ಯ ಆಕರ್ಷಣೆ ಏನೆಂದರೆ, ಪಾಲಿಸಿದಾರನ ಮರಣದ ಸಂದರ್ಭದಲ್ಲಿ ಪೂರ್ಣ ವಿಮಾ ಮೊತ್ತವನ್ನು ನಾಮಿನಿಗೆ ಪಾವತಿಸಲಾಗುತ್ತದೆ. ಇದು ಸಂಪೂರ್ಣವಾಗಿ ಒಂದು ಜೀವ ವಿಮಾ ಯೋಜನೆಯಂತೆ ಕಾರ್ಯನಿರ್ವಹಿಸುತ್ತದೆ. ಕುಟುಂಬದ ಭದ್ರತೆಗೆ ಇದು ನಿಜಕ್ಕೂ ಮಹತ್ವಪೂರ್ಣ ಸಾಧನವಾಗಬಹುದು.
ಇದೆಲ್ಲದರ ಜೊತೆಗೆ, ಈ ಯೋಜನೆಯ ಮೂಲಕ ಅಥವ 35 ಲಕ್ಷ ರೂ.ಗಳವರೆಗೆ ಮೆಚ್ಯೂರಿಟಿ ಮೊತ್ತ ಪಡೆಯಬಹುದಾಗಿದೆ. ಇದು ಹಣಕಾಸು ಭದ್ರತೆಗಾಗಿ ಅತ್ಯುತ್ತಮ ಯೋಜನೆಯೆಂದು ಪರಿಗಣಿಸಲಾಗಿದೆ.
ಹೀಗೆ ನೋಂದಾಯಿಸಿಕೊಳ್ಳಿ:
ಈ ಯೋಜನೆಗೆ ಸೇರಬೇಕಾದರೆ, ನಿಮಗೆ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡುವುದು ಅಗತ್ಯ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಈ ದಾಖಲೆಗಳನ್ನು ಜೊತೆಗೆ ತರಬೇಕು:
- ಆಧಾರ್ ಕಾರ್ಡ್
- ವಿಳಾಸ ಪುರಾವೆ (Address Proof)
- ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರ
ಇವುಗಳನ್ನು ನೀಡಿದ ಬಳಿಕ, ನೀವು ಅಂಚೆ ಅಧಿಕಾರಿಗಳ ಸಹಾಯದಿಂದ ಈ ಯೋಜನೆಗೆ ಸರಿ ಹೊಂದುವಂತೆ ಪ್ರೀಮಿಯಂ ಆಯ್ಕೆಮಾಡಿ, ನಿಮಗಿಷ್ಟವಾದ ವಿಮಾ ರಕ್ಷಣೆ ಪಡೆಯಬಹುದು.
Read More :ಕಡಿಮೆ ಹೂಡಿಕೆಯಿಂದ ಅಧಿಕ ಲಾಭದ ಕೋಳಿ ಸಾಕಾಣಿಕೆ ವ್ಯವಹಾರ – ಪ್ರತಿ ತಿಂಗಳು ₹30,000 ಗಳಿಸುವ ವಿಧಾನ !
ಅವರು MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 2019ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಅವರು ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.