ಹೊಸನಗರ ; ರೈತ ಪರ ಹೋರಾಟಗಾರ ಜಯರಾಮ್ ಶೆಟ್ಟಿಯವರನ್ನು ಮುತ್ತಣ್ಣ ಎಸ್ ಶಿವಳ್ಳಿರವರ ನೇತೃತ್ವದ ಅಹಿಂದ ವರ್ಗದ ರೈತರ ಜನರ ರಕ್ಷಣೆಗಾಗಿ ನಿರ್ಮಿಸಿಕೊಂಡಿರುವ ರಾಷ್ಟ್ರೀಯ ಅಹಿಂದ ಸಂಘಟನೆಯ ರೈತ ಮೋರ್ಚಾದ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಹೊಸನಗರ ಜಯರಾಮ್ ಶೆಟ್ಟಿಯನ್ನು ಆಯ್ಕೆ ಮಾಡಲಾಗಿದೆ.
ಜಯರಾಮ್ ಶೆಟ್ಟಿ ಈ ಹಿಂದೆ ರೈತರ ಪರವಾಗಿ ಅನೇಕ ಹೋರಾಟದಲ್ಲಿ ಭಾಗವಹಿಸುವುದರ ಜೊತೆಗೆ ನ್ಯಾಯ ಕೊಡಿಸಿದ್ದಾರೆ.
ಹಕ್ಕುಪತ್ರ ವಜಾ ಮಾಡಬೇಕು ಎಂದು ಸಾಗರದ ಉಪ ವಿಭಾಗದ ಕಛೇರಿಯಿಂದ ರೈತರಿಗೆ ನೋಟಿಸ್ ಬಂದ ತಕ್ಷಣ ಈ ಕುರಿತು ಮಲೆನಾಡು ರೈತ ಹೋರಾಟಗಾರರು ತೀ.ನಾ ಶ್ರೀನಿವಾಸ್ ಹಾಗೂ ಜಿಲ್ಲಾ ರೈತ ಒಕ್ಕೂಟದ ಅಧ್ಯಕ್ಷ ಜೊತೆಗೆ ರೈತರೊಂದಿಗೆ ಸಂವಾದನೆ ನಡೆಸಿ ರೈತರ ಆತ್ಮಸ್ಥೈರ್ಯ ಹೆಚ್ಚಿಸಿದವರು ಏನು ಮಾಡಬೇಕೆಂದು ತಿಳಿಯದ ಅಮಾಯಕ ರೈತರಿಗೆ ದಾರಿದೀಪದಂತೆ ನಿಂತು ಆಶ್ವಾಸನೆ ನೀಡಿದವರು ಇವರು ರೈತರಿಗೆ ಬೆನ್ನೆಲುಬಾಗಿ ನಿಂತು ಮಲೆನಾಡಿನ ಭಾಗದ ರೈತರಿಗೆ ಏನೇ ಅನ್ಯಾಯವಾದರೂ ಅವರ ಪರವಾಗಿ ನಿಂತು ಹೋರಾಟ ನಡೆಸುವುದರಲ್ಲಿ ಪ್ರಮುಖ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಲಾಗಿದೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.