ಶಿವಮೊಗ್ಗ :110/11 ಕೆ.ವಿ ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಆಗಸ್ಟ್ 23 (ಶುಕ್ರವಾರ) ಬೆಳಗ್ಗೆ 10:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಹಲವು ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಮೆಸ್ಕಾಂ (MESCOM) ಪ್ರಕಟಿಸಿದೆ.
ವಿದ್ಯುತ್ ವ್ಯತ್ಯಯವಾಗುವ ಬಡಾವಣೆಗಳು
- ಹೊಸಮನೆ, ಹೊಸಮನೆ ಚಾನಲ್ ಏರಿಯಾ
- ಶರಾವತಿನಗರ A ಮತ್ತು B ಬ್ಲಾಕ್
- ಆಯುರ್ವೇದ ಕಾಲೇಜು, ಕುವೆಂಪು ರಸ್ತೆ, ಸಾಗರ ರಸ್ತೆ, ಆಯನೂರು ಗೇಟ್
- ಆದಿಚುಂಚನಗಿರಿ ಸಮುದಾಯ ಭವನ, ಯೂನಿಟಿ ಆಸ್ಪತ್ರೆ
- ಜೈಲ್ ವೃತ್ತ, ಸುಬ್ಬಯ್ಯ ಆಸ್ಪತ್ರೆ, ಜೈಲ್ ರಸ್ತೆ
- ಸತ್ಯಂ ಫೋರ್ವಿಂಗ್ಸ್, ಎ.ಆರ್.ಬಿ ಕಾಲೋನಿ, ಅಶೋಕನಗರ, ಅಣ್ಣಾನಗರ
- ಪಂಪನಗರ, ರಂಗನಾಥ ಬಡಾವಣೆ, ಮಿಳಘಟ್ಟ, ಟಿಪ್ಪುನಗರ (ಬಲಭಾಗ)
- ಬಿ.ಎಸ್.ಎನ್.ಎಲ್ ಭವನ, ಪಾರ್ಕ್ ಎಕ್ಸ್ಟೆಂಷನ್, ದುರ್ಗಿಗುಡಿ
- ಜಿಲ್ಲಾ ಪಂಚಾಯತ್ ಕಚೇರಿ, ತಿಲಕ್ ನಗರ, ಆರ್.ಎಂ.ಆರ್ ರಸ್ತೆ
- ಜಯನಗರ, ಬಸವನಗುಡಿ, ನಂಜಪ್ಪ ಆಸ್ಪತ್ರೆ, ಮ್ಯಾಕ್ಸ್ ಆಸ್ಪತ್ರೆ
- ಶಿವಮೂರ್ತಿ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿ, ಎ.ಎನ್.ಕೆ ರಸ್ತೆ
- ಅಚ್ಯುತರಾವ್ ಬಡಾವಣೆ, ಸವಳಂಗ ರಸ್ತೆ, ರಾಘವೇಂದ್ರ ಸ್ವಾಮಿ ಮಠ ಹಾಗೂ ಸುತ್ತಮುತ್ತಲಿನ ಪ್ರದೇಶಗಳು
ಸಾರ್ವಜನಿಕರಿಗೆ ಸಲಹೆ
👉 ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ತಾತ್ಕಾಲಿಕ ಅಸೌಕರ್ಯ ಉಂಟಾಗಲಿದ್ದು, ನಾಗರಿಕರು ಸಹಕಾರ ನೀಡುವಂತೆ ಮೆಸ್ಕಾಂ ಕೋರಿದೆ.