Hosanagara | ಪಶು ಆಸ್ಪತ್ರೆಗೆ 480 ಚೀಲ ಮೇವಿನ ಬೀಜ ವಿತರಣೆ ; ಮಲ್ಲಿಕಾರ್ಜುನ ಸ್ವಾಮಿ
ಹೊಸನಗರ: ತಾಲ್ಲೂಕಿನ ಎಲ್ಲ ಪಶು ವೈದ್ಯ ಆಸ್ಪತ್ರೆಗೆ ಸುಮಾರು 480 ಮೇವಿನ ಜೋಳದ ಬೀಜದ ಬ್ಯಾಗ್ ಸರ್ಕಾರ ವಿತರಿಸಿದೆ ಎಂದು ಹೊಸನಗರ ಪಶು ವೈದ್ಯಾಧಿಕಾರಿ ಮಲ್ಲಿಕಾರ್ಜುನ ಸ್ವಾಮಿಯವರು ಹೇಳಿದರು.
ಇಲ್ಲಿನ ಪಶು ವೈದ್ಯ ಆಸ್ಪತ್ರೆಯ ಆವರಣದಲ್ಲಿ ಗೋವಿಂದರಾಜು ಎಂಬುವವರಿಗೆ ಮೇವು ಜೋಳದ ಬೀಜದ ಬ್ಯಾಗ್ ವಿತರಣೆ ಮಾಡಿ ಮಾತನಾಡಿ, ಹೊಸನಗರ ಪಶು ವೈದ್ಯ ಇಲಾಖೆಗೆ ತಾಲೂಕಿನ ಎಲ್ಲ ಪಶು ಆಸ್ಪತ್ರೆಗಳಿಗೆ ಹಂಚಲು 5 ಕೆ.ಜಿ ತೂಕದ 480 ಚೀಲ ಮೇವಿನ ಬೀಜ ಸರ್ಕಾರ ನೀಡಿದ್ದು ಆಯಾಯ ಪಶು ಇಲಾಖೆಯ ದನ, ಎಮ್ಮೆಗಳ, ಸಾಕಾಣಿಕೆಯ ಅನುಗುಣವಾಗಿ ಚೀಲಗಳ ವಿತರಣೆ ನಡೆಸಲಾಗುವುದು ಎಂದರು.
ಗುರುತಿನ ಚೀಟಿ ಕಡ್ಡಾಯ:
ಮೇವು ಜೋಳದ ಬೀಜ ಪಡೆಯಲು ರೈತರ ಗುರುತಿನ ಚೀಟಿ ಕಡ್ಡಾಯವಾಗಿದ್ದು ಈ ವರ್ಷ ಬರಗಾಲ ಆವರಿಸಿರುವುದರಿಂದ ರೈತರು ತಮ್ಮ ಭತ್ತದ ಗದ್ದೆ ಕೊಯ್ಲು ಮುಗಿದ ನಂತರ ಗದ್ದೆಗಳಲ್ಲಿ ತೇವಾಂಶ ಇರುವ ಜಾಗದಲ್ಲಿ ಈ ಜೋಳದ ಬೀಜ ಬಿತ್ತನೆ ಮಾಡಿದರೆ ದನ-ಕರುಗಳಿಗೆ ಅಲ್ಪ-ಸ್ವಲ್ಪ ಮೇವುಗಳು ಸಿಕ್ಕಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ ನಾಗರಾಜ್ ಹೆಚ್.ಎಸ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.