ಡಿ. 15 ರಂದು ಮಾಯಾನಗರಿ ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆ ; ನಟ ಭರತ್ ಸಾಗರ್

0 422

ಸಾಗರ : ಇದೇ ತಿಂಗಳು 15 ರಂದು ಮಾಯಾನಗರಿ (Mayanagari) ಚಲನಚಿತ್ರ (Film) ಲೋಕಾರ್ಪಣೆಯಾಗುತ್ತಿದ್ದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಮಾಯಾನಗರಿ ಚಿತ್ರದ ನಾಯಕ ನಟ ಭರತ್ ಸಾಗರ್ ಅವರು ತಿಳಿಸಿದರು.


ಇಲ್ಲಿನ ಅಣಲೇಕೊಪ್ಪ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಚಲನ ಚಿತ್ರದ ಪೋಷ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ನಾನು ಮಲೆನಾಡಿ ಹುಡುಗನಾಗಿದ್ದು ಸಾಗರದಲ್ಲಿ ಹುಟ್ಟಿ ಬೆಳೆದು ಓದು ನಡೆಸಿದ್ದೇನೆ. ಉದ್ಯೋಗದ ನಿಮಿತ್ತ ಮ್ಯೆಸೂರು ಬೆಂಗಳೂರಿಗೆ ಹೋದಾಗ ಅಕಸ್ಮಾತ್ ಚಲನಚಿತ್ರ ನಿರ್ಮಾಪಕರ ಪರಿಚಯವಾಗಿ ಕೆಲವು ಚಿತ್ರದಲ್ಲಿ ನಟಿಸಿದ್ದೇನೆ. ಈಗ ಮಾಯಾನಗರಿ ಎನ್ನುವ ವಿಭಿನ್ನ ಕಥೆಯುಳ್ಳ ಹಾಗೂ ಕುಟುಂಬ ಸಮೇತವಾಗಿ ಎಲ್ಲರೂ ನೋಡುವಂತ ಹಾರರ್ ಚಲನಚಿತ್ರದಲ್ಲಿ ಹೀರೋ ಆಗಿ ನಟನೆಯನ್ನು ಮಾಡಿದ್ದೇನೆ ಇದನ್ನು ಪ್ರೇಕ್ಷಕರು ನೋಡಿ ಆಶೀರ್ವಾದವನ್ನು ಮಾಡಿ ಎಂದು ಮನವಿ ಮಾಡಿದರು.


ಅನೇಕ ನಾಟಕಗಳಲ್ಲಿ ಅಭಿನಯವನ್ನು ಮಾಡಿದ ನನಗೆ ನಟನೆ ಮಾಡಬೇಕು ಎನ್ನುವುದು ಒಂದು ಕನಸು. ಈ ಕನಸು ಈಗ ಈಡೇರುವ ಕಾಲ ಬಂದಿದೆ. ಮಲೆನಾಡಿನ ಬಗ್ಗೆ ಅತ್ಯಂತ ಗೌರವವನ್ನು ಇಟ್ಟುಕೂಂಡಿರುವ ನನಗೆ ಇಲ್ಲಿನ ಪರಿಸರದ ಮಧ್ಯೆ ನಟನೆ ಮಾಡಿ ಅದನ್ನು ಪರೆದೆಯ ಮೇಲೆ ತರುತ್ತಿರುವುದು ಸಂತೋಷವಾಗುತ್ತಿದೆ. ಸಾಗರ, ಜೋಗ್ ಫಾಲ್ಸ್ ಹಾಗೂ ಅದರ ಸುತ್ತಾಮುತ್ತ, ಚಿಕ್ಕಮಗಳೂರು ಜಿಲ್ಲೆ ಹೀಗೆ ನಿಮ್ಮ ಊರಿನಲ್ಲಿಯೇ ಚಿತ್ರೀಕರಣ ಮಾಡಿದ್ದೇನೆ ಎಂದು ತಿಳಿಸಿದರು.


ಈ ಚಿತ್ರದಲ್ಲಿ ಹೆಸರಾಂತ ಹಿರಿಯ ಕಲಾವಿದರು ನಟನೆಯನ್ನು ಮಾಡಿದ್ದಾರೆ. ಅವಿನಾಶ್, ದ್ವಾರಕೀಶ್, ಲೋಹಿತಾಶ್ವ, ಸುಚೇಂದ್ರಪ್ರಸಾದ್ ಹಾಗೂ ಹಾಸ್ಯ ಕಲಾವಿದರಾಗಿ ಚಿಕ್ಕಣ್ಣ ಅವರು ಪಾತ್ರವನ್ನು ಮಾಡಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್‍ಜನ್ಯ ಸಂಗೀತವನ್ನು ನೀಡಿದ್ದಾರೆ, ಶ್ರಾವ್ಯ ಅವರು ಹೀರೋಯಿನ್ ಆಗಿ ನಟನೆ ಮಾಡಿದ್ದಾರೆ.

ನಾನು ಈಗಾಗಲೆ ಮೂರು ಸಿನಿಮಾದಲ್ಲಿ ನಟನೆಯನ್ನು ಮಾಡಿದ್ದೇನೆ. ಮುಂದೆ ಪೂರ್ಣಾವದಿ ಹೀರೋ ಪಾತ್ರವಿರುವ ಸಿನಿಮಾ ಸದ್ಯದಲ್ಲಿಯೇ ತೆರೆಗೆ ಬರಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಂಜು, ಸತೀಶ್, ವಿಶ್ವ, ಕುಮಾರ್ ಇನ್ನಿತರು ಹಾಜರಿದ್ದರು.

Leave A Reply

Your email address will not be published.

error: Content is protected !!