ಹೊಸನಗರ ಆರ್ಯ ಈಡಿಗ ಸಂಘದ ಅವ್ಯವಹಾರ ವಿರುದ್ಧ ಹಿತರಕ್ಷಣಾ ವೇದಿಕೆ ಹೋರಾಟಕ್ಕೆ ತಾತ್ಕಾಲಿಕ ಬ್ರೇಕ್ !

Written by Mahesha Hindlemane

Published on:

ಹೊಸನಗರ : ತಾಲ್ಲೂಕಿನ ಆರ್ಯ ಈಡಿಗ ಸಂಘದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ.ಗಳ ಅವ್ಯವಹಾರ ಕುರಿತು ತಾಲೂಕು ದೀವರ ವಿದ್ಯಾವರ್ಧಕ (ಈಡಿಗ) ಹಿತರಕ್ಷಣಾ ವೇದಿಕೆ ಇದೇ 26ರ ಗುರುವಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆ ವೇಳೆ ನಡೆಸಲು ಉದ್ದೇಶಿಸಿದ್ದ ಕಪ್ಪು ಬಾವುಟ ಪ್ರದರ್ಶನವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಡಾ. ಸೊನಲೆ ಶ್ರೀನಿವಾಸ್ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ದೀವರ ಸಮಾಜದ ಹಿರಿಯ ಚೇತನ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಲಹೆ ಮೇರೆಗೆ ಇದೇ ಡಿಸೆಂಬರ್ 31ರಂದು ಪಟ್ಟಣದ ಮಾವಿನಕೊಪ್ಪದಿಂದ ಈಡಿಗ ಸಭಾಭವನದವರೆಗೆ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದಿದ್ದಾರೆ.

ಡಿಸೆಂಬರ್ 31 ರೊಳಗೆ ತಾಲೂಕು ಈಡಿಗ ಸಂಘದ ಸ್ವಘೋಷಿತ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಿ, ಲೆಕ್ಕಪತ್ರ ತಪಾಸಣೆಗೆ  ಕಾಗೋಡು ತಿಮ್ಮಪ್ಪ ಅಂತಿಮ ಗಡುವು ನಿಗದಿಪಡಿಸಿದ ಹಿನ್ನೆಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಮುಂದುಡಲಾಗಿದೆ. ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ವೇದಿಕೆ ಭಿನ್ನ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಹಿತರಕ್ಷಣಾ ವೇದಿಕೆಯ ಮುಖಂಡರು ಈ ಕುರಿತು ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಹರತಾಳು ಹಾಲಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಗಮನಾರ್ಹ ಸಂಗತಿ ಎಂದಿದ್ದಾರೆ.  

ಈ ವೇಳೆ ವೇದಿಕೆಯ ಕಾರ್ಯದರ್ಶಿ ಎನ್.ಇ. ಸ್ವಾಮಿ, ಗೌರವಾಧ್ಯಕ್ಷ ಮಂಡಾನಿ ಎಂ.ಕುಮಾರ್, ಉಪಾಧ್ಯಕ್ಷ ಹಾರೆಕೊಪ್ಪ ಹೆಚ್.ಆರ್. ಶ್ರೀಧರ್, ವಾಸಪ್ಪ ಮಾಸ್ತಿಕಟ್ಟೆ, ಭಾಸ್ಕರ ಮುಳುಗೇರಿ, ಮಾಕನಕಟ್ಟೆ ಗಣಪತಿ, ಯಡಗುಡ್ಡೆ ಷಣ್ಮುಖಪ್ಪ, ಕಾಪಿ ಮಹೇಶ್ ಸೇರಿದಂತೆ ಹಲವರು ಹಾಜರಿದ್ದರು.

Leave a Comment