ಹೊಸನಗರ

ನಾವು ಕೆಲಸಕ್ಕೆ ಹೆದರುವರಲ್ಲ ಆದರೆ ನಮಗೆ ನ್ಯಾಯವಾಗಿ ದೊರಕಬೇಕಾದ ಸೌಲಭ್ಯ ಒದಗಿಸಿ : ಹೊಸನಗರ ಆಶಾ ಕಾರ್ಯಕರ್ತೆಯರ ಅಳಲು

ಹೊಸನಗರ : ಕೇಂದ್ರ ಸರ್ಕಾರದ ಅನುಮೋದನೆ ಇಲ್ಲದ, ಅನುದಾನ ಇಲ್ಲದ 9 ಚಟುವಟಿಕೆಗಳ ಪ್ರೋತ್ಸಾಹ ಧನದ ಪ್ರಮುಖ ಮಾಡ್ಯೂಲ್‌ಗಳನ್ನು ಆಶಾ ನಿಧಿ ತಂತ್ರಾಂಶದಲ್ಲಿ ನಿಷ್ಕ್ರಿಯಗೊಳಿಸಿದ್ದು, ಅವುಗಳಿಗೆ ಅನುಮೋದನೆ ಸಿಗುವವರೆಗೆ ಈ ಕೆಲಸಗಳನ್ನು ಆಶಾ ಕಾರ್ಯಕರ್ತೆಯರು ಮಾಡುವುದಿಲ್ಲವೆಂದು ಸರ್ಕಾರಕ್ಕೆ ಹೊಸನಗರ ತಾಲೂಕಿನ ಆಶಾ ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1Dm2DYzVk1/

ಹೊಸನಗರದಲ್ಲಿ ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತೆಯರು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪ್ರತಿನಿತ್ಯ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ನೀಡಲಾಗುತ್ತಿರುವ ಪ್ರೋತ್ಸಾಹ ಧನದ ಪ್ರಮುಖ ಚಟುವಟಿಕೆಗಳ
ಮಾಡ್ಯೂಲ್‌ಗಳನ್ನು ಮತ್ತು ಇತರ ಕುಟುಂಬ ಕಲ್ಯಾಣ ಸೇವೆಗಳು ಸೇರಿದಂತೆ ಒಟ್ಟು 9 ಪ್ರಮುಖ ಸೇವೆಗಳನ್ನು ಆಶಾ ನಿಧಿ ತಂತ್ರಾಂಶಗಳು ಏಕಾಏಕಿ ನಿಷ್ಕ್ರೀಯಗೊಳಿಸಲಾಗಿದೆ. ಇದರಿಂದ ನಮ್ಮ ಜೀವನ ನಿರ್ವಹಣೆ ದುಸ್ತರವಾಗಿದೆ. ಈ ಚಟುವಟಿಕೆಗಳಿಗೆ ಪ್ರೋತ್ಸಾಹ ಧನವಿಲ್ಲದಿದ್ದರೂ ಕರ್ತವ್ಯ ನಿರ್ವಹಿಸಬೇಕು. ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ ಎಂದು ಬೆದರಿಸಿ ಕೆಲಸ ಮಾಡಿಸುತ್ತಿರುವುದು ಖಂಡನಾರ್ಹವಾಗಿದೆ.

inshot_20260601_1440042317303405692439011719.jpg

ಆದ್ದರಿಂದ ಆರೋಗ್ಯ ಇಲಾಖೆಯಲ್ಲಿದ್ದು ಇಂತಹ Unfair Labour Practice ನಿಲ್ಲಿಸಬೇಕು ಉಲ್ಲೇಖಿತ ಪತ್ರದಲ್ಲಿ ನಮೂದಿಸಿರುವ 9 ಚಟುವಟಿಕೆಗಳನ್ನು ಸದ್ಯಕ್ಕೆ ಆಶಾ ಕಾರ್ಯಕರ್ತೆಯರಿಂದ ಮಾಡಿಸಬಾರದು ಎಂದು ಒತ್ತಾಯಿಸುವ ಮನವಿ ಪತ್ರವನ್ನು ತಾಲೂಕು ಆರೋಗ್ಯಾಧಿಕಾರಿ ಡಾ. ದಿನೇಶ್ ರಿಗೆ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಆರೋಗ್ಯಧಿಕಾರಿ, ತಮ್ಮ ನೈಜ ಬೇಡಿಕೆಗಳ ಮನವಿ ಪತ್ರವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.

inshot_20260601_1442556296197479667244938438.jpg

ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಪೂರ್ಣಿಮಾ, ಕಾರ್ಯದರ್ಶಿ ಸುಮಾ, ಸವಿತಾ, ನಾಗರತ್ನ, ಸುಮಾ, ರೇಖಾ ಸತ್ಯ, ಚಿತ್ರ, ರೇಖಾ ಪಿ, ನಗೀನಾ ಹಾಗೂ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Leave a Comment