HOSANAGARA ; ವೈಚಾರಿಕ ಪ್ರಜ್ಞೆಯ ಚಿಂತಕ ಸರ್ವಧರ್ಮ ಸಮಭಾವದ ಪ್ರತಿಪಾದಕ ಕನ್ನಡದ ನಾಡಿ ಎಂದೇ ಖ್ಯಾತರಾಗಿದ್ದ ಡಾ. ನಾರ್ಬರ್ಟ್ ಡಿಸೋಜರವರ ಅಕಾಲಿಕ ನಿಧನಕ್ಕೆ ನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇಂದು ವಿಶೇಷ ಸಭೆ ನಡೆಸಿ ಅಶ್ರುತರ್ಪಣ ಮಿಡಿಯಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಕೊಡಿಗೆ ಗಣೇಶಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸೇರಿದ ಸಂತಾಪ ಸೂಚಕ ಸಭೆಯಲ್ಲಿ ಸಾಹಿತಿ ಅಂಬ್ರಯ್ಯಮಠ, ಡಾ ಮಾರ್ಷಲ್ ಶರಾಮ್, ಕೆ ಇಲಿಯಾಸ್, ಕುಬೇಂದ್ರಪ್ಪ, ಕೆ ಎಸ್ ರಾಮಕೃಷ್ಣಮೂರ್ತಿ, ಕೆ ಸುರೇಶ್ ಕುಮಾರ್, ಕೆ ಕೆ ಅಶ್ವಿನಿ ಕುಮಾರ್, ಜಿ ಎನ್ ಬಸಪ್ಪಗೌಡ, ಗುರುದೇವ ಭಂಡಾರ್ಕರ್, ಎಸ್ ಹೆಚ್ ಲಿಂಗಮೂರ್ತಿ, ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು ನಾಡಿನ ಅಪ್ರತಿಮ ಬರಹಗಾರ ನಾಡಿಯವರ ನಿಧನಕ್ಕೆ ಕಂಬನಿ ಮಿಡಿದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.