ಆಗುಂಬೆ, ಜೂನ್ 13: ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅವರು ಮುಂಗಾರು ಹವಾಮಾನದಲ್ಲಿ ಭಾರಿ ವಾಹನ ಸಂಚಾರದಿಂದ ಆಗಬಹುದಾದ ಭೂ ಕುಸಿತದ ಭೀತಿಯ ಹಿನ್ನೆಲೆಯಲ್ಲಿ, ಜೂ. 15 ರಿಂದ ಸೆಪ್ಟೆಂ. 30ರವರೆಗೆ ಸಾರ್ವಜನಿಕ ಮತ್ತು ಸರಕು ಸಾಗಣೆ ವಾಹನ (heavy vehicles)ಗಳು ಆಗುಂಬೆ ಘಾಟಿಯಲ್ಲಿ ಸಂಚಾರ ನಿಷೇಧ ಎಂದು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಭಾರಿ ವಾಹನಗಳ ಪರ್ಯಾಯ ಮಾರ್ಗಗಳು:
- ಉಡುಪಿ–ತೀರ್ಥಹಳ್ಳಿ ನಡುವೆ ಸಂಚರಿಸುವ ಭಾರಿ ವಾಹನಗಳು ಈಗ ಉಡುಪಿ → ಕುಂದಾಪುರ → ಸಿದ್ಧಾಪುರ → ಮಾಸ್ತಿಕಟ್ಟೆ → ತೀರ್ಥಹಳ್ಳಿಗೆ ಪರ್ಯಾಯ ಮಾರ್ಗ
- ಜೊತೆಗೆ ಇನ್ನೊಂದು ಪರ್ಯಾಯ ಮಾರ್ಗ ಎಂದರೆ: ಉಡುಪಿ-ತೀರ್ಥಹಳ್ಳಿಗೆ ಉಡುಪಿ-ಕಾರ್ಕಳ-ಮಾಳ ಘಾಟಿ-ಶೃಂಗೇರಿ-ತೀರ್ಥಹಳ್ಳಿ ಪರ್ಯಾಯ ಮಾರ್ಗದಲ್ಲಿ ಸಂಚಾರ ನಡೆಸುವಂತೆ ಸೂಚಿಸಲಾಗಿದೆ.
Read more
ವಿಮಾನ ದುರಂತ – ದುರಾದೃಷ್ಟಕರ ದುಃಖದ ಸಂಗತಿ, ಮಡಿದವರ ಆತ್ಮಕ್ಕೆ ಶಾಂತಿ ಲಭಿಸಲಿ ; ಹೊಂಬುಜ ಶ್ರೀಗಳು