ತೀರ್ಥಹಳ್ಳಿ: ಇಲ್ಲಿನ ಹೆಸರಾಂತ ನಟಮಿತ್ರರು ಹವ್ಯಾಸಿ ಕಲಾ ಸಂಘದ ಹಿರಿಯ ಮತ್ತು ಕಿರಿಯ ಕಲಾವಿದರ ಸಮ್ಮಿಲನದಲ್ಲಿ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಪ್ರದರ್ಶನಗೊಂಡ ಹೆಸರಾಂತ ರಂಗಕರ್ಮಿ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ “ಆ ಊರು ಈ ಊರು” ನಾಟಕ ತಾಲೂಕಿನ ರಂಗಾಸಕ್ತರ ಮೆಚ್ಚುಗೆಗಳಿಸಿತು.
ಗಣೇಶ ಹಬ್ಬದ ಅಂಗವಾಗಿ ಆ.27 ರಂದು ಶಿವಮೊಗ್ಗದಲ್ಲಿ ಮಾಂಸ ಮಾರಾಟ ನಿಷೇಧ
ಡಾ.ಜಿ.ಬಿ.ಜೋಷಿ(ಜಡಭಾರತ)ರವರ ರಚನೆಯ ಈ ನಾಟಕವು ಹುಲಗಪ್ಪ ಕಟ್ಟಿಮನಿಯವರ ವಿಭಿನ್ನ ಶೈಲಿಯ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.ಶಿವಕುಮಾರ ಟಿ.ಆರ್.ರವರ ಸಹ ನಿರ್ದೇಶನ ಮತ್ತು ಬೆಳಕು,ಅರವಿಂದ್ ಟಿ.ಎನ್.ರವರ ರಂಗಸಜ್ಜಿಕೆ,ಗುರುರಾಜ್.ಪಿ.ವಿ.ಯವರ ಪ್ರಸಾಧನ ಹಾಗೂ ಹರಿ ವಿನಾಯಕ್ ರವರ ಸಂಗೀತ ನಿರ್ವಹಣೆ ಒಟ್ಟಾರೆ ನಾಟಕದ ಎರಡು ಯಶಸ್ವಿ ಪ್ರದರ್ಶನಕ್ಕೆ ಮೆರಗು ನೀಡಿತು.
Malnad Times App ಡೌನ್ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

