ತೀರ್ಥಹಳ್ಳಿ: ಇಲ್ಲಿನ ಹೆಸರಾಂತ ನಟಮಿತ್ರರು ಹವ್ಯಾಸಿ ಕಲಾ ಸಂಘದ ಹಿರಿಯ ಮತ್ತು ಕಿರಿಯ ಕಲಾವಿದರ ಸಮ್ಮಿಲನದಲ್ಲಿ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಪ್ರದರ್ಶನಗೊಂಡ ಹೆಸರಾಂತ ರಂಗಕರ್ಮಿ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ “ಆ ಊರು ಈ ಊರು” ನಾಟಕ ತಾಲೂಕಿನ ರಂಗಾಸಕ್ತರ ಮೆಚ್ಚುಗೆಗಳಿಸಿತು.
ಗಣೇಶ ಹಬ್ಬದ ಅಂಗವಾಗಿ ಆ.27 ರಂದು ಶಿವಮೊಗ್ಗದಲ್ಲಿ ಮಾಂಸ ಮಾರಾಟ ನಿಷೇಧ
ಡಾ.ಜಿ.ಬಿ.ಜೋಷಿ(ಜಡಭಾರತ)ರವರ ರಚನೆಯ ಈ ನಾಟಕವು ಹುಲಗಪ್ಪ ಕಟ್ಟಿಮನಿಯವರ ವಿಭಿನ್ನ ಶೈಲಿಯ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.ಶಿವಕುಮಾರ ಟಿ.ಆರ್.ರವರ ಸಹ ನಿರ್ದೇಶನ ಮತ್ತು ಬೆಳಕು,ಅರವಿಂದ್ ಟಿ.ಎನ್.ರವರ ರಂಗಸಜ್ಜಿಕೆ,ಗುರುರಾಜ್.ಪಿ.ವಿ.ಯವರ ಪ್ರಸಾಧನ ಹಾಗೂ ಹರಿ ವಿನಾಯಕ್ ರವರ ಸಂಗೀತ ನಿರ್ವಹಣೆ ಒಟ್ಟಾರೆ ನಾಟಕದ ಎರಡು ಯಶಸ್ವಿ ಪ್ರದರ್ಶನಕ್ಕೆ ಮೆರಗು ನೀಡಿತು.