ಮಲೆನಾಡಿನ ವಿಶ್ವಾಸಾರ್ಹ ಸುದ್ದಿ · ಶಿವಮೊಗ್ಗ · ಚಿಕ್ಕಮಗಳೂರು · ಕರ್ನಾಟಕ
ಮುಖಪುಟಹೊಸನಗರ
ಹೊಸನಗರ

ರಿಪ್ಪನ್‌ಪೇಟೆ : ಅಖಂಡ ಭಾರತ ಸಂಕಲ್ಪ ದಿನಾಚರಣೆ

ರಿಪ್ಪನ್‌ಪೇಟೆ : ದೇಶ ವಿಭಜನೆಯ ಸಂದರ್ಭ ನಡೆದ ಮಾರಣ ಹೋಮದಲ್ಲಿ ಲಕ್ಷಾಂತರ ಹಿಂದೂಗಳ ಬಲಿದಾನದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾಗಿದೆ. ಹಿಂದೂ ಸಮಾಜ ತನ್ನ ಇತಿಹಾಸ ಪರಂಪರೆ ಹಾಗೂ ಪೂರ್ವಪರ ಬಲಿದಾನವನ್ನು ಎಂದಿಗೂ ಮರೆಯಬಾರದು ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ ಸಹ ಸಂಯೋಜಕ…

Mahesh Hindlemane
ಪ್ರಕಟಿತ: 10 Aug 2026, 9:27 PM · ನವೀಕರಿಸಿದ: 10 Aug 2026, 9:27 PM

ಸುದ್ದಿ ಸಾರಾಂಶ

ರಿಪ್ಪನ್‌ಪೇಟೆ : ದೇಶ ವಿಭಜನೆಯ ಸಂದರ್ಭ ನಡೆದ ಮಾರಣ ಹೋಮದಲ್ಲಿ ಲಕ್ಷಾಂತರ ಹಿಂದೂಗಳ ಬಲಿದಾನದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾಗಿದೆ. ಹಿಂದೂ ಸಮಾಜ ತನ್ನ ಇತಿಹಾಸ ಪರಂಪರೆ ಹಾಗೂ ಪೂರ್ವಪರ ಬಲಿದಾನವನ್ನು ಎಂದಿಗೂ ಮರೆಯಬಾರದು ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ…

WhatsApp Group Join Now
Telegram Group Join Now
Instagram Group Join Now
ಸ್ಥಳಹೊಸನಗರ
ಪ್ರಕಟಿತ ಸಮಯ10 Aug 2026, 9:27 PM
ಮೂಲ ಪರಿಶೀಲನೆಸ್ಥಳೀಯ ಮಾಹಿತಿ, ಅಧಿಕೃತ ಪ್ರಕಟಣೆ ಅಥವಾ ವರದಿಗಾರರ ಪರಿಶೀಲನೆ ಆಧಾರ.
📢 Stay Updated! Join our WhatsApp Channel Now →

ರಿಪ್ಪನ್‌ಪೇಟೆ : ದೇಶ ವಿಭಜನೆಯ ಸಂದರ್ಭ ನಡೆದ ಮಾರಣ ಹೋಮದಲ್ಲಿ ಲಕ್ಷಾಂತರ ಹಿಂದೂಗಳ ಬಲಿದಾನದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾಗಿದೆ. ಹಿಂದೂ ಸಮಾಜ ತನ್ನ ಇತಿಹಾಸ ಪರಂಪರೆ ಹಾಗೂ ಪೂರ್ವಪರ ಬಲಿದಾನವನ್ನು ಎಂದಿಗೂ ಮರೆಯಬಾರದು ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ ಸಹ ಸಂಯೋಜಕ ಸತೀಶ್‌ ದಾವಣಗೆರೆ ಕರೆ ನೀಡಿದರು.

ರಿಪ್ಪನ್‌ಪೇಟೆಯ ಹಿಂದೂ ಜಾಗರಣ ವೇದಿಕೆಯವರು ಪಟ್ಟಣದ ನಾಲ್ಕು ಪ್ರಮುಖ ರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಿ ನಂತರ ಶ್ರೀರಾಮಮಂದಿರದಲ್ಲಿ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ದಿನದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ವಿಭಜನೆಯ ಸಂದರ್ಭದಲ್ಲಿ ತಮ್ಮ ತಾಯ್ನಾಡು, ಧರ್ಮ ಹಾಗೂ ಸಂಸ್ಕೃತಿಗಾಗಿ ಅನೇಕರು ಪ್ರಾಣತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ ಎಂದರು.

ಪಂಜಿನ ಮೆರವಣಿಗೆಯಲ್ಲಿ ಭಾರತ್ ಮಾತಾ ಕೀ ಜೈ, ಅಖಂಡ ಹಿಂದೂ ಸ್ಥಾನಕೀ ಜೈ ಹಾಗೂ ವಂದೇ ಮಾತರಂ ಘೋಷಣೆಗಳನ್ನು ಕೂಗುತ್ತಾ ಕಾರ್ಯಕರ್ತರು ಕೈಯಲ್ಲಿ ಪಂಜುಗಳನ್ನು ಹಿಡಿದು ದೇಶಭಕ್ತಿ ಹಾಗೂ ಅಖಂಡ ಭಾರತದ ಸಂಕಲ್ಪವನ್ನು ಪುನರುಚ್ಚರಿಸಿದರು.

ಆಟೋ ಪ್ರಕಾಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಪವನ್‌ ಶಿರಾಳಕೊಪ್ಪ, ಜಿಲ್ಲಾ ನಿಧಿ ಪ್ರಮುಖ್ ದೇವರಾಜ್ ಕುಷನ್ ಕೆರೆಹಳ್ಳಿ, ಸಂಜಯ್, ತಾಲ್ಲೂಕು ಸಂಚಾಲಕ ರಾಘವೇಂದ್ರ, ಮಂಜುನಾಥ ಆಚಾರ್, ನಾಗರತ್ನ ದೇವರಾಜ್, ರಂಜನ್ ಇನ್ನಿತರರು ಪಾಲ್ಗೊಂಡಿದ್ದರು.

ಸಂಪಾದಕೀಯ ಸೂಚನೆ: ಈ ಸುದ್ದಿಯಲ್ಲಿ ತಪ್ಪು ಅಥವಾ ತಿದ್ದುಪಡಿ ಅಗತ್ಯವಿದ್ದರೆ ನಮ್ಮ ಸಂಪರ್ಕ ಪುಟದ ಮೂಲಕ ತಿಳಿಸಿ. ಪ್ರಕಟಿತ ಮಾಹಿತಿಯನ್ನು ಪರಿಶೀಲಿಸಿ ಅಗತ್ಯವಿದ್ದರೆ ನವೀಕರಿಸಲಾಗುತ್ತದೆ.
ಸುದ್ದಿ ಹಂಚಿಕೊಳ್ಳಿ
ಲೇಖಕರ ಮಾಹಿತಿ

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>

ಈ ಲೇಖಕರ ಇನ್ನಷ್ಟು ಸುದ್ದಿಗಳು