ರೈತರಿಂದ ಸಂಸ್ಕರಣ ಯಂತ್ರೋಪಕರಣ ವಿತರಣೆಗೆ ಅರ್ಜಿ ಆಹ್ವಾನ ; ಸಚಿನ್ ಹೆಗಡೆ

Written by Mahesh Hindlemane

Published on:

ಹೊಸನಗರ ; ಪ್ರಸಕ್ತ ಸಾಲಿನ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಡಿ ರೈತರಿಗೆ ಸಂಸ್ಕರಣಾ ಯಂತ್ರೋಪಕರಣಗಳ ವಿತರಣೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಹೊಸನಗರ ಸಹಾಯಕ ಕೃಷಿ ನಿರ್ದೆಶಕ ಸಚಿನ್ ಹೆಗಡೆ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕಬ್ಬಿನ ರಸ ತೆಗೆಯುವ ಯಂತ್ರ, ರೊಟ್ಟಿ ಮತ್ತು ಹಪ್ಪಳ ಮಾಡುವ ಯಂತ್ರ, ಶ್ಯಾವಿಗೆಯಂತ್ರ, ರೈಸ್ ಮಿಲ್ ಎಣ್ಣೆ ತೆಗೆಯುವ ಯಂತ್ರ, ಖಾರ/ಮಸಾಲೆ ಕುಟ್ಟುವ ಯಂತ್ರ, ರವಾಯಂತ್ರ, ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳನ್ನು ವಿತರಿಸಲಾಗುತ್ತದೆ.

ಸಾಮಾನ್ಯ ವರ್ಗದ ರೈತರಿಗೆ ಶೇ.50 ರಿಯಾಯಿತಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ.90 ರಿಯಾಯಿತಿಯಲ್ಲಿ ಯಂತ್ರಗಳನ್ನು ನೀಡಲಾಗುತ್ತದೆ.

ಆಸಕ್ತ ರೈತರು ಪಹಣಿ (ಆರ್.ಟಿ.ಸಿ) ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಪುಸ್ತಕದ ಝೇರಾಕ್ಸ್ ಪ್ರತಿಗಳನ್ನು, ಎರಡು ಭಾವಚಿತ್ರ ಹಾಗೂ 100 ರೂಪಾಯಿಯ ಛಾಪ ಕಾಗದದೊಂದಿಗೆ ತಮ್ಮ ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು‌.

ಹೆಚ್ಚಿನ ಮಾಹಿತಿಯನ್ನು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Leave a Comment