ನಾಡಹಬ್ಬ ದಸರಾ : ಹೊಸನಗರದಲ್ಲಿ ಅದ್ದೂರಿ ಆಯುಧ ಪೂಜೆ

Written by Mahesha Hindlemane

Published on:

ಹೊಸನಗರ : ನಾಡಹಬ್ಬ ದಸರಾದ ಶರನ್ನವರಾತ್ರಿ ಪ್ರಯುಕ್ತ ನವಮಿ ದಿನವಾದ ಮಂಗಳವಾರದಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಅದ್ದೂರಿ ಆಯುಧ ಪೂಜೆ ನೆರವೇರಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ನಾಡದೇವಿ ಶ್ರೀ ಚಾಮುಂಡೇಶ್ವರಿ ಭಾವಚಿತ್ರಕ್ಕೆ ವಿವಿಧ ಪುಷ್ಪಗಳಿಂದ ವಿಶೇಷ ಅಲಂಕಾರ  ಮಾಡಲಾಗಿತ್ತು. ಪಿಸ್ತೂಲ್, ಬಂದೂಕು ಹಾಗೂ ಹತ್ತಾರು ಬೈಕ್, ಜೀಪ್, ಕಾರುಗಳಿಗೆ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ನಡೆಯಿತು.

ಅರ್ಚಕ ಕೃಷ್ಣಮೂರ್ತಿ ಪೌರೋಹಿತ್ಯದಲ್ಲಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಹಲವು ಗಣ್ಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನೆರವೇರಿತು. ಪೂಜೆಗೆ ಆಗಮಿಸಿದ್ದ ಹಲವರಿಗೆ ಫಲಪುಷ್ಪ ಸಹಿತ ಪ್ರಸಾದ ವಿನಿಯೋಗಿಸಲಾಯಿತು.

ಪಿಎಸ್ಐ ಶಂಕರ್ ಗೌಡ ಪಾಟೀಲ್, ನಿವೃತ್ತ ಎಎಸ್ಐ ರತ್ನಾಕರ್ ಗೌಡ, ಸಿಬ್ಬಂದಿಗಳಾದ ವೆಂಕಟೇಶ್, ಮಾಯಣ್ಣ, ಗೋಪಾಲಕೃಷ್ಣ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Comment