ಬಿವೈಆರ್ ಹುಟ್ಟುಹಬ್ಬ ಹಿನ್ನೆಲೆ ; ರಿಪ್ಪನ್‌ಪೇಟೆ ವರಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರರ ಹುಟ್ಟುಹಬ್ಬದ ಅಂಗವಾಗಿ ಕೆರೆಹಳ್ಳಿ ಹೋಬಳಿ ಬಿ.ಜೆ.ಪಿ ಮಹಾಶಕ್ತಿ ಕೇಂದ್ರದವರು ಇಲ್ಲಿನ ಪುರಾಣ ಪ್ರಸಿದ್ದ ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು‌.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸಂಸದ ಬಿ.ವೈ.ರಾಘವೇಂದ್ರರವರು ಜಿಲ್ಲೆಯ ಸರ್ವಾಂಗೀಣಾಭಿವೃದ್ದಿಗೆ ಹೆಚ್ಚು ಶ್ರಮಿಸುತ್ತಿದ್ದು ಇವರ ಅವಧಿಯಲ್ಲಿನ ಅಭಿವೃದ್ದಿ ಕಾರ್ಯಗಳು ಜನಸಾಮಾನ್ಯರಲ್ಲಿ ಮಾತನಾಡುವಂತೆ ಮಾಡಿವೆ. ಇವರ ಈ ಶ್ರಮಕ್ಕೆ ಭಗವಂತ ಇನ್ನೂ ಹೆಚ್ಚಿನ ಶಕ್ತಿಯನ್ನು ಕರುಣಿಸುವಂತೆ ಸಿದ್ದಿವಿನಾಯಕವನ್ನು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಮುಖಂಡರು ಪಾಲ್ಗೊಂಡಿದ್ದರು.


ಸರ್ಕಾರಿ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆ

ರಿಪ್ಪನ್‌ಪೇಟೆ ; ಇಲ್ಲಿನ ಬರುವೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಶಿವಮೊಗ್ಗ ಕಾರ್ಮಿಕ ಪರಿಷತ್‌ ವತಿಯಿಂದ ಲೇಖನ ಸಾಮಗ್ರಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಉಮೇಶ್, ಜಿಲ್ಲಾ ಕಾರ್ಮಿಕ ಪರಿಷತ್ ಘಟಕದ ಅಧ್ಯಕ್ಷ ಹೆಚ್.ಜೆ.ನಾಗೇಶ, ಜಿಲ್ಲಾ ಮಹಿಳಾ ಕಾರ್ಮಿಕ ಪರಿಷತ್ ಅಧ್ಯಕ್ಷೆ ಹೆಚ್.ಜಿ.ವೇದಾವತಿ, ಉಪಾಧ್ಯಕ್ಷ ಮಂಜು, ಕಾರ್ಯದರ್ಶಿ ಗೀತಾ ಅಣ್ಣಪ್ಪ, ಸೀತಾರಾಜಪ್ಪ, ಅನ್ನಪೂರ್ಣ, ಸುಶೀಲ, ಶಾಲಾ ಶಿಕ್ಷಕ ವೃಂದ ಹಾಜರಿದ್ದರು.

Leave a Comment