ಕಾಲ್ಪನಿಕ ವೇತನಕ್ಕೆ ಸಂಬಂಧಿಸಿದ ಅಂತಿಮ ತೀರ್ಪು ಶೀಘ್ರ ನೀಡುವಂತೆ ಮನವಿ
ಚಿಕ್ಕಮಗಳೂರು : 2006ರ ಪೂರ್ವದಲ್ಲಿ ನೇಮಕಾತಿ ಹೊಂದಿದ ಅನುದಾನಿತ ಶಾಲಾ ಕಾಲೇಜು ನೌಕರರಿಗೆ ಹಳೆಯ ನಿವೃತ್ತ ಪಿಂಚಣಿ ಆದೇಶ ಹೊರಡಿಸುವ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಅವರನ್ನು ಭೇಟಿ ಮಾಡಿ ಕಾಲ್ಪನಿಕ ವೇತನಕ್ಕೆ ಸಂಬಂಧಿಸಿದಂತೆ ಆದಷ್ಟು ಬೇಗ ಅಂತಿಮ ತೀರ್ಪು ನೀಡುವಂತೆ ವಿನಂತಿಸಿ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದ ಸೇವಾಕಾಂಕ್ಷಿ ನಂಜೇಶ್ ಬೆಣ್ಣೂರು, ನ್ಯಾಯವಾದಿಗಳಾದ ಜನಾರ್ಧನ ರವರು, ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ರಾಜ್ಯಾಧ್ಯಕ್ಷರು ಎಂಪಿಎಂ ಷಣ್ಮುಖಯ್ಯ, ಕರ್ನಾಟಕ ಪಾಲಿಟೆಕ್ನಿಕ್ ನೌಕರರ ಸಂಘದ ರಾಜ್ಯಾಧ್ಯಕ್ಷರು ಶಿವಾನಂದ ಸ್ವಾಮಿ, ಬೋಧಕೇತರ ಘಟಕದ ರಾಜೇಶ್ವರಿ, ಮುಖ್ಯ ನ್ಯಾಯಾಲಯದಲ್ಲಿ ಕೇಸ್ಗೆ ಸಂಬಂಧಿಸಿದಂತೆ ವ್ಯವಹರಿಸುತ್ತಿರುವ ಮಹೇಂದ್ರ ಬಡಿಗೇರ್ ಇತರರು ಇದ್ದರು.