ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿಗೆ ಹುಣಸೇಹಳ್ಳಿ ರಾಜಪ್ಪಗೌಡ ಆಯ್ಕೆ

0 35

ಚಿಕ್ಕಮಗಳೂರು : ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನೀಡಲಾಗುವ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿಗೆ ಕವಿ, ಸಾಹಿತಿ ಹುಣಸೇಹಳ್ಳಿ ರಾಜಪ್ಪಗೌಡ ಪಾತ್ರರಾಗಿದ್ದಾರೆ.

ರಾಜಪ್ಪಗೌಡಅವರುಕವಿಯಾಗಿ,ಚುಟುಕು ಸಾಹಿತಿಯಾಗಿ, ಸಿನಿಮಾ ಕಲಾವಿದರಾಗಿ ಮತ್ತು ಬರಹಗಾರರಾಗಿ ಗುರುತಿಸಿ ಕೊಂಡಿದ್ದಾರೆ.

ನಗರದ ಬೇಲೂರುರಸ್ತೆಯಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಯಲ್ಲಿ ಫೆ.8 ರಂದು ಸಂಜೆ 5 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಸಾಹಿತಿ, ವಿಮರ್ಶಕ ಡಾ.ಸತ್ಯನಾರಾಯಣಅವರು ರಾಜಪ್ಪ ಗೌಡರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ಡಿ. ಅನಿಲ್ ಕುಮಾರ್‌ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕುಂದೂರು ಅಶೋಕ್ ಅಧ್ಯಕ್ಷತೆ ವಹಿಸಲಿದ್ದಾರೆ.

ಇದೇ ವೇಳೆ ಕನ್ನಡ ಕಲಿ- ಕನ್ನಡ ಉಲಿ ಸ್ಪರ್ಧಾಕಾರ್ಯಕ್ರಮ ನಡೆಯಲಿದ್ದು ವಿಜೇತರಿಗೆ ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ಎಸ್.ಟಿ.ವಿನಯ್‌ ಕುಮಾರ್ ಬಹುಮಾನ ವಿತರಣೆ ಮಾಡಲಿದ್ದಾರೆ. ಭೂಮಿಕಟಿವಿಯ ಮುಖ್ಯಸ್ಥ ಅನಿಲ್ ಆನಂದ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

Leave A Reply

Your email address will not be published.

error: Content is protected !!