Electric Shock | ವಿದ್ಯುತ್ ಸರಿಪಡಿಸಲು ಹೋಗಿ ಕಂಬದಲ್ಲೇ ಸುಟ್ಟು ಕರಕಲಾದ ರೈತ !

0 749

ತರೀಕೆರೆ : ವಿದ್ಯುತ್ ದುರಸ್ತಿಗೆ ಮುಂದಾದ ವೇಳೆ ಕರೆಂಟ್ ಶಾಕ್ (Electric Shock) ಹೊಡೆದು ರೈತನೋರ್ವ (Farmer) ಸಾವನ್ನಪ್ಪಿರುವ ಘಟನೆ ತರೀಕೆರೆ (Tharikere) ತಾಲೂಕಿನ ಮಲ್ಲಿಗೆನಹಳ್ಳಿ ಸಂಭವಿಸಿದೆ.

ಮಲ್ಲಿಗೆನಹಳ್ಳಿ ರೈತ ಮಂಜುನಾಥ್ (35) ಮೃತ ದುರ್ದೈವಿ. ಮೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡದೆ ರೈತ ಮಂಜುನಾಥ್ ವಿದ್ಯುತ್ ಸಮಸ್ಯೆ ಸರಿಪಡಿಸಲು ಹೋದಾಗ ಕ್ಷಣಾರ್ಧದಲ್ಲೇ ಕರೆಂಟ್‌ ಪ್ರವಹಿಸಿದೆ, ಈ ವೇಳೆ ಮಂಜುನಾಥ್‌ ದೇಹ ಸುಟ್ಟು ಕರಕಲಾಗಿದೆ‌.

ವಿದ್ಯುತ್ ಕಂಬದಲ್ಲೇ ಮೃತದೇಹವು ಸಿಲುಕಿದ್ದು, ಮೃತನ ಕುಟುಂಬಸ್ಥರು ಹಾಗೂ ಸ್ಥಳೀಯರ ರೋಧನೆ ಮುಗಿಲು ಮುಟ್ಟಿತ್ತು‌.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

Leave A Reply

Your email address will not be published.

error: Content is protected !!