Bele Vime:ಕರ್ನಾಟಕದ ರೈತರಿಗಾಗಿ ಇಲ್ಲಿದೆ ಒಂದು ಗುಡ್ ನ್ಯೂಸ್ ! ಮುಂಗಾರು 2023-24 ಹಂಗಾಮಿನಲ್ಲಿ ಬೆಳೆ ನಷ್ಟವನ್ನು ಅನುಭವಿಸಿರುವ 80,191 ರೈತರ ಖಾತೆಗಳಿಗೆ ₹81.36 ಕೋಟಿ ರೂ.ಗಳ ಬೆಳೆ ವಿಮಾ ಪರಿಹಾರ ಹಣವನ್ನು ನೇರ ಲಾಭ ವರ್ಗಾವಣೆಯ ಮೂಲಕ (DBT) ಮೂಲಕ ಜಮಾ ಮಾಡಲಾಗಿದೆ. ಇದು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ( PMFBY ) ಮತ್ತು ರಿವೈಸ್ಟ್ ವೆದರ್ ಬೇಸ್ಡ್ ಕ್ರಾಪ್ ಇನ್ಷುರೆನ್ಸ್ ಸ್ಕೀಮ್ (REBCIS) ಅಡಿಯಲ್ಲಿ ನೀಡಿದ ಪರಿಹಾರವಾಗಿದೆ.
ಬೆಳೆ ವಿಮೆ ಹಣವನ್ನು ಪರಿಶೀಲಿಸುವುದು ಹೇಗೆ?
ರೈತರು ಈ ಮಾಹಿತಿಯನ್ನು ಪರಿಶೀಲಿಸಲು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಸುಲಭವಾಗಿ ಬೆಳೆ ವಿಮೆ ಸ್ಟೇಟೆಸ್ ಅನ್ನು ತಿಳಿಯಬಹುದಾಗಿದೆ.
ಬೆಳೆ ವಿಮೆ ಹಣವನ್ನು ಪರಿಶೀಲಿಸುವ ಹಂತಗಳು
- ಸಮರಕ್ಷಣೆ ಗೆ ಲಾಗಿನ್ ಆಗಿ. (www.samrakshane.karnataka.gov.in)
- “Check Status” ಅಯ್ಕೆಯನ್ನ ಆರಿಸಿಕೊಳ್ಳಿ
- ಮೊಬೈಲ್ ಸಂಖ್ಯೆ ಅಥವಾ ಅರ್ಜಿ ಸಂಖ್ಯೆಯನ್ನು ನಮೂದು ಮಾಡಿ.
- ವರ್ಷ ಮತ್ತು ಋತು (ಮುಂಗಾರು/ಖರೀಫ್) ಇದನ್ನ ಆಯ್ಕೆ ಮಾಡಿ.
- ಪರಿಹಾರ ಹಣದ ವಿವರಣೆಯನ್ನು ಕುರಿತಾಗಿ ತಪಾಸಣೆಯನ್ನು ಮಾಡಿ.
ಹಣವು ಈಗಾಗಲೇ ಎಲ್ಲಾ ರೈತರಿಗೂ ಬಿಡುಗಡೆ ಆಗಿದೆಯೇ?
- ಉತ್ತರ ಕನ್ನಡ ಜಿಲ್ಲೆಯ 80,191 ರೈತರಿಗೆ ₹81.36 ಕೋಟಿ ಹಣ ಬಿಡುಗಡೆ ಆಗಿದೆ.
- ರಾಜ್ಯದಾದ್ಯಂತ 5.58 ಲಕ್ಷ ರೈತರಿಗೆ ಒಟ್ಟು ₹1,248. ಕೋಟಿ ಬಿಡುಗಡೆ ಆಗಿದೆ.
ಈ ಹಣವನ್ನು ಆಧಾರ್ ಗೆ ಲಿಂಕ್ ಆಗಿರುವಂತಹ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆ ಮಾಡಲಾಗಿದೆ.
ಯಾವ ಯಾವ ಬೆಳೆಗಳಿಗೆ ಈ ಬೆಳೆ ವಿಮೆ ಅನ್ವಯವಾಗುತ್ತದೆ ?
ಅಕ್ಕಿ, ಜೋಳ, ಹತ್ತಿ, ಸೋಯಾಬೀನ್ ರಾಗಿ ಹಾಗೂ ಇನ್ನಿತರೆ ಬೆಳೆಗಳಿಗೆ ಈ ಬೆಳೆ ವಿಮೆ ಅನ್ವಯವಾಗುವುದು. ಅಡಿಕೆ, ಬಾಳೆ, ಏಲಕ್ಕಿಯಂತಹ ತೋಟಗಾರಿಕೆ ಬೆಳೆಗಳಿಗೆ ಈ ವಿಮೆಯು ಅನ್ವಯವಾಗುವುದಿಲ್ಲ.
ಈ ಯೋಜನೆಯ ಉದ್ದೇಶದ ಕುರಿತಾಗಿ ಹೇಳುವುದಾದರೆ, ರೈತರಿಗೆ ಹಲವು ಕಾರಣಗಳಿಂದ ಅಂದರೆ ಹವಾಮಾನ ವೈಪರೀತ್ಯ, ಅತಿವೃಷ್ಟಿ, ಅನಾವೃಷ್ಟಿ ಮತ್ತು ಬೆಳೆಗೆ ರೋಗಗಳಂತಹು ತಗುಲಿ ಬೆಳೆ ನಷ್ಟವಾದಾಗ ಪರಿಹಾರ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಇಲ್ಲಿ ವಿಮೆ ಹಣ ತಕ್ಷಣವೇ ಸಿಗದಿದ್ದರೂ ನಿಗಧಿತ ಪ್ರಕ್ರಿಯೆಗಳ ನಂತರ ಖಾತೆಯಲ್ಲಿ ಹಣ ಜಮೆಯಾಗುವುದು.
ಹೆಚ್ಚಿನ ಮಾಹಿತಿಗಳಿಗಾಗಿ ತಾಲೂಕು ಕೃಷಿ ಕಛೇರಿ / ಬ್ಯಾಂಕ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.
Read More
ಜೂನ್ 30ರಿಂದ ಹಣ ಕಳಿಸುವ ಮೊದಲು ಫೋನ್ ಪೇ, ಗೂಗಲ್ ಪೇ ಬಗ್ಗೆ ತಿಳಿದುಕೊಂಡರೆ ಒಳ್ಳೆಯದು!
ಮಹಾಮಳೆಗೆ ಕಾಫಿನಾಡಿನಲ್ಲಿ ಮೂರನೇ ಬಲಿ ; ಆಟೋ ಮೇಲೆ ಮರ ಬಿದ್ದು ಚಾಲಕ ಸಾವು !
Author Profile
-
ಅವರು MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 2019ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಅವರು ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.
Latest entries
AgricultureMay 28, 2025ರೈತರಿಗೆ ಮಿನಿ ಟ್ರ್ಯಾಕ್ಟರ್, ಪಾಲಿಹೌಸ್, ಹನಿ ನೀರಾವರಿ ಸಹಾಯಧನಕ್ಕೆ ಅರ್ಜಿ ಆಹ್ವಾನ!
AgricultureMay 28, 2025ರೈತರಿಗೋಸ್ಕರ ಬರೋಬ್ಬರಿ ಶೇ 90ರಷ್ಟು ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ಸೆಟ್ ವಿತರಣೆ!ಇಂದೇ ಅಪ್ಲೈ ಮಾಡಿ
NewsMay 28, 2025ಶಿವಮೊಗ್ಗ- ಮೈಸೂರು ಎಕ್ಸ್ಪ್ರೆಸ್ ರೈಲಿನ ಲೇಟೆಸ್ಟ್ ಅಪ್ಡೇಟ್ !
Shivamogga NewsMay 27, 2025ವಿಐಎಸ್ಎಲ್ ಕಾರ್ಖಾನೆಗೆ ಕಾಯಕಲ್ಪ; ಕೈಗಾರಿಕಾ ಸಚಿವ ಕುಮಾರಸ್ವಾಮಿ ಹೇಳಿಕೆ ಬಿವೈಅರ್ ಮೆಚ್ಚುಗೆ