ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯ ಹೊಸ ವಿಧಾನ: ಪೋಷಕರು, ವಿದ್ಯಾರ್ಥಿಗಳು ಗಮನಿಸಿ!

Written by Koushik G K

Published on:

ಇ -ಹಾಜರಾತಿ :ಕರ್ನಾಟಕದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಿಂದ ಹೊಸದಾರಿ ಪ್ರಾರಂಭವಾಗುತ್ತಿದೆ. ವಿದ್ಯಾರ್ಥಿಗಳ ಹಾಜರಾತಿಯನ್ನು ಮೊದಲು ಸಾಮಾನ್ಯವಾಗಿ ಹೆಸರು ಕೂಗಿ ದಾಖಲಿಸಲಾಗುತ್ತಿತ್ತು. ಆದರೆ ಈಗ, ಆ ವಿಧಾನಕ್ಕೆ ಬದಲಾಗಿ ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ ಹಾಜರಾತಿ ದಾಖಲಿಸುವ ನವೀನ ಕ್ರಮ ಜಾರಿಗೆ ಬಂದಿದೆ.ಈ ‘ಇ-ಹಾಜರಾತಿ’ ಯೋಜನೆಗೆ ರಾಜ್ಯ ಸರ್ಕಾರದಿಂದ 5 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ.

WhatsApp Group Join Now
Telegram Group Join Now
Instagram Group Join Now

ಹೊಸ ನಿಯಮ ಏನು?

ಇ -ಹಾಜರಾತಿ‘ ಎಂಬ ಹೆಸರಿನಲ್ಲಿ ಆರಂಭವಾಗಿರುವ ಈ ಯೋಜನೆಯಡಿಯಲ್ಲಿ, ಶಿಕ್ಷಕರು ಪ್ರತಿದಿನ ಶಾಲೆಗೆ ಬರುವ ವಿದ್ಯಾರ್ಥಿಗಳ ಫೋಟೋವನ್ನು ಮೊಬೈಲ್ ಮೂಲಕ ಕ್ಲಿಕ್ಕಿಸಿ, ಆಧುನಿಕ ಆಪ್‌ ಮೂಲಕ ಅಪ್‌ಲೋಡ್ ಮಾಡುವ ಮೂಲಕ ಹಾಜರಾತಿ ದಾಖಲಿಸಲಿದ್ದಾರೆ. ಈ ಕ್ರಮದ ಮೂಲಕ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ಹೆಚ್ಚಳವಾಗಲಿದೆ ಎಂಬುದೇ ಉದ್ದೇಶ.

ಈ ಕ್ರಮದ ಲಾಭಗಳು:

  • ವಿದ್ಯಾರ್ಥಿಗಳ ನಿಖರ ಹಾಜರಾತಿ ನಿರ್ವಹಣೆ
  • ಪೋಷಕರು ಮಕ್ಕಳ ಹಾಜರಾತಿ ಬಗ್ಗೆ ತಕ್ಷಣ ಮಾಹಿತಿ ಪಡೆಯುವ ಅವಕಾಶ
  • ಶಿಕ್ಷಕರಿಗೆ ಕಡಿಮೆ ಕಾಗದ ಪತ್ರದ ಕೆಲಸ
  • ರಾಜ್ಯ ಮಟ್ಟದ ಶಿಕ್ಷಣ ಇಲಾಖೆಗೆ ಉತ್ತಮ ಮಾಹಿತಿಯ ವ್ಯವಸ್ಥೆ

ಯೋಜನೆಯ ಉದ್ದೇಶ:

ಬಾಲಕಿಯರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸುವುದು, ಶಿಸ್ತಿನ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ವಿದ್ಯಾರ್ಥಿಗಳ ಮೇಲಿನ ನಿಗಾವಹಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ.

“ಇ-ಹಾಜರಾತಿಯ ಪ್ರಯೋಗದಿಂದ ವಿದ್ಯಾರ್ಥಿಯ ಹಾಜರಾತಿ ಶಿಸ್ತನ್ನು ಖಾತರಿಪಡಿಸಬಹುದು. ಇದರಿಂದ ಗುಣಮಟ್ಟದ ಶಿಕ್ಷಣಕ್ಕೆ ಧಕ್ಕೆಯಿಲ್ಲದೆ ನಿರ್ವಹಣೆ ಸುಗಮವಾಗುತ್ತದೆ.” -ಸಚಿವ ಮಧು ಬಂಗಾರಪ್ಪ

ಈ ಹೊಸ ಕ್ರಮವು ಶಾಲಾ ನಿರ್ವಹಣೆಯಲ್ಲಿ ಪಾರದರ್ಶಕತೆಗೆ ದಾರಿ ಮಾಡಿಕೊಡಲಿದೆ ಎಂದು ರಾಜ್ಯ ಶಿಕ್ಷಣ ಇಲಾಖೆ ಆಶಿಸಿದ್ದಾರೆ, ಪೋಷಕರು ಮತ್ತು ವಿದ್ಯಾರ್ಥಿಗಳು ಈ ಹೊಸ ತಂತ್ರಜ್ಞಾನವನ್ನು ಸ್ವೀಕರಿಸಿ ಸಹಕಾರ ನೀಡಬೇಕಾಗಿದೆ.

Read more:ನಕ್ಷತ್ರ ಚಿಹ್ನೆ ಇರುವ 500 ನೋಟು ನಿಮ್ಮ ಪಾಕೆಟ್‌ನಲ್ಲಿ ಇದೆಯಾ? ಸತ್ಯ ಗೊತ್ತಾದ್ರೆ ತಲೆತಿರುಗುತ್ತೆ!

Leave a Comment