ಹೊಸನಗರ ; ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹೊಸನಗರ ತಾಲೂಕು ಕಾರ್ಯಕಾರಿ ಸಮಿತಿಗೆ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಚುನಾವಣೆ ನಡೆದಿದ್ದು ಮಹಿಳಾ ಮೀಸಲು ಕ್ಷೇತ್ರಕ್ಕೆ ಗುಳ್ಳೆಕೊಪ್ಪ ಶಾಲೆಯ ಆರ್ ಮಂಜುಳಾ, ರಿಪ್ಪನ್ಪೇಟೆ ಶಾಲೆಯ ಹೆಚ್ ನೀಲಾವತಿ, ಹೊಸನಗರ ಪಿಎಂಶ್ರೀ ಶಾಲೆಯ ಗಾಯತ್ರಿ ಎನ್ ಪಟಗಾರ, ಹೊರಬೈಲು ಶಾಲೆಯ ಹೆಚ್ ಸಿ ಶಿವಪ್ಪ, ಹೆಬ್ಬಳ್ಳಿ ಶಾಲೆಯ ಎಂ ಎಸ್ ಶಿವಮೂರ್ತಿ, ಹಾರೋಹಿತ್ಲು ಶಾಲೆಯ ಎಂ ಮಾಲ್ತೇಶ್, ಜೇನಿ ಶಾಲೆಯ ಕೆ ಜಿ ಪುಟ್ಟಸ್ವಾಮಿ, ಅಮೃತ ಶಾಲೆಯ ಎಂ ಎಂ ಈಶ್ವರಪ್ಪ ಚುನಾಯಿತರಾಗಿದ್ದಾರೆ.
ಇವರುಗಳ ಆಯ್ಕೆಯನ್ನು ಚುನಾವಣಾ ಅಧಿಕಾರಿ ಹೆಚ್ ಎಮ್ ಸುಬ್ರಹ್ಮಣ್ಯ ಘೋಷಿಸಿದರು.

