ಅತಿಯಾದ ರಾಸಾಯನಿಕ ಗೊಬ್ಬರ ಬಳಕೆ ಗಿಡಗಳಿಗೆ ಹಾನಿಕಾರಕ ; ಮಂಜುನಾಥ್

Written by Mahesha Hindlemane

Published on:

ಹೊಸನಗರ : ಅತಿಯಾದ ರಾಸಾಯನಿಕ ಗೊಬ್ಬರವನ್ನು ಗಿಡಗಳಿಗೆ ಬಳಸುವುದರಿಂದ ಗಿಡಗಳ ಮೇಲೆ ದುಷ್ಪರಿಣಾಮಗಳು ಬೀರುತ್ತದೆ. ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಗಿಡಗಳಿಗೆ ಬೇಕಾಗುವ ರೀತಿಯಲ್ಲಿ ಗೊಬ್ಬರಗಳನ್ನು ಸಿಂಪಡಿಸಿ ಎಂದು ನುರಿತ ವಿಜ್ಞಾನಿ ಮಂಜುನಾಥ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕಚ್ಚಿಗೆಬೈಲು ಗ್ರಾಮದಲ್ಲಿ ಅಮೃತ್ ಆರ್ಗ್ಯಾನಿಕ್ ಫರ್ಟಿಲೈಸರ್ಸ್ಸ್ ಮಲ್ಲಾಡಿಹಳ್ಳಿ (ಹೊಳಲ್ಕೆರೆ ತಾಲ್ಲೂಕು) ವತಿಯಿಂದ ರೈತರ ಸಭೆಯನ್ನು ನಡೆಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಬೆಳೆಗಳ ಸಮಗ್ರ ನಿರ್ವಹಣೆ ಕೀಟ ಹಾಗೂ ರೋಗಗಳ ಗುರುತಿಸುವಿಕೆ ಮತ್ತು ಅವುಗಳ ವೈಜ್ಞಾನಿಕ ನಿಯಂತ್ರಣ ಕ್ರಮಗಳ ಕುರಿತು ರೈತರಿಗೆ ಸಮಗ್ರ ಮಾಹಿತಿಯನ್ನು ನೀಡಿ ಅಮೃತ್ ಸಂಸ್ಥೆಯ ಸಾವಯುವ ಉತ್ಪನ್ನಗಳ ಉಪಯೋಗಗಳ ಬಗ್ಗೆ ಸಮಗ್ರವಾಗಿ ವಿವರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಹೊಸನಗರ ತಾಲ್ಲೂಕು ಪುರಪ್ಪೆಮನೆ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್, ಉಪಾಧ್ಯಕ್ಷ ಬಿ.ಟಿ ಸತ್ಯನಾರಾಯಣ, ಕಾರ್ಯದರ್ಶಿ ಅರವಿಂದ್, ಕಂಪನಿಯ ಉದ್ಯೋಗಿ ವಿಜ್ಞಾನಿ ಮಂಜುನಾಥ್, ಭೂ ವಿಜ್ಞಾನಿ ಅನಂತ್‌ಕುಮಾರ್ ಪಾಟೀಲ್, ಮಾರ್ಕೆಟಿಂಗ್ ಡೈರೇಕ್ಟರ್ ವಿನಯ್ ಕಚ್ಚಿಗೆಬೈಲು, ಅನಿಲ್ ಗೌಡ, ಹರೀಶ್ ಹಾಗೂ ನೂರಾರು ಸಂಖ್ಯೆಯ ರೈತರು ಉಪಸ್ಥಿತರಿದ್ದರು,

Leave a Comment