Ripponpete

ಕಳಪೆ ಗುಣಮಟ್ಟದ ಟ್ರ್ಯಾಕ್ಟರ್ ನೀಡಿ ರೈತರಿಗೆ ವಂಚನೆ, ಬೆದರಿಕೆ ಆರೋಪ

RIPPONPETE ; ಇಲ್ಲಿನ ಶಿವಮೊಗ್ಗ ರಸ್ತೆಯಲ್ಲಿರುವ ಕಾಳೆ ಅಗ್ರಿಟೆಕ್ ಷೋ ರೂಂನಲ್ಲಿ ಕಳೆದ ಮೂರು ವರ್ಷದ ಹಿಂದೆ ಕಳಪೆ ಗುಣಮಟ್ಟದ ಹೆಸರಾಂತ ಜಾನ್ ಡೀರ್ ಟ್ರ್ಯಾಕ್ಟರ್‌ ಅನ್ನು ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಲಾದ ಮಂಡ್ರಳ್ಳಿ ರೈತರಾದ ಲಕ್ಷ್ಮಿನಾರಾಯಣ ಹಾಗೂ ಸತೀಶ್ ಮತ್ತು ರಾಜೇಂದ್ರ ಎಂಬುರಿಗೆ ನೀಡಿ ವಂಚಿಸಿದ್ದಾರೆಂದು ಆರೋಪಿಸಿ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ ರಾಜ್ಯಾಧ್ಯಕ್ಷ ಡಾ.ರವಿಶೆಟ್ಟಿ ಬೈಂದೂರು ಇವರು ಟ್ರ್ಯಾಕ್ಟರ್ ಕಂಪನಿ ವ್ಯವಸ್ಥಾಪಕರ ವಿರುದ್ದ ಕ್ರಮಕ್ಕೆ ಆಗ್ರಹಿಸಿದರು.

WhatsApp Group Join Now
Telegram Group Join Now
Instagram Group Join Now

ಕಳೆದ ಮೂರು ವರ್ಷದ ಹಿಂದೆ ಖರೀದಿಲಾದ ಟ್ಯ್ಯಾಕ್ಟರ್‌ನ ಮನೆಗೆ ತರುವ ವೇಳೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು ಯಂತ್ರದಲ್ಲಿ ತಾಂತ್ರಿಕ ದೋಷವನ್ನು ಸರಿಪಡಿಸುವ ಬಗ್ಗೆ ಷೋ ರೂಂ ಸೇಲ್ಸ್ ಮನ್ ಜೊತೆ ಸಂಪರ್ಕಿಸಿ ಚರ್ಚಿಸಲಾಗಿ ಆಗ ಸೇಲ್ಸ್ ಮನ್ ಕಂಪನಿಯ ವ್ಯವಸ್ಥಾಪಕರ ಗಮನಕ್ಕೆ ತರುವುದರೊಂದಿಗೆ ದುರಸ್ಥಿಗೊಳಿಸುವ ಇಲ್ಲವೇ ವಾರಂಟಿಯಂತೆ ತಮಗೆ ಬದಲಿ ವಾಹನ ನೀಡುವ ಭರವಸೆ ನೀಡಿದ್ದು ಮೂರು ವರ್ಷಗಳಿಂದಲೂ ಇದನ್ನೆ ಹೇಳಿಕೊಂಡು ಟ್ರ್ಯಾಕ್ಟರ್ ಖರೀದಿಸಿದ ರೈತರನ್ನು ನಿತ್ಯ ಅಲೆಯುವಂತೆ ಮಾಡಿ ಈಗ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿದರು.

ಲಕ್ಷಾಂತರ ರೂಪಾಯಿ ಹಣವನ್ನು ಹಾಕಿ ಕೃಷಿ ಚಟುವಟಿಕೆಗಾಗಿ ಖರೀದಿಸಲಾದ ಟ್ರ್ಯಾಕ್ಟರ್ ಇದ್ದರೂ ಬಾಡಿಗೆ ಟ್ರ್ಯಾಕ್ಟರ್ ತಂದು ಕೃಷಿ ಚಟುವಟಕೆ ಮಾಡುವ ಅನಿರ್ವಾತೆ ಎದುರಾಗಿದೆ. ಕಂಪನಿ ವ್ಯವಸ್ಥಾಪಕ ದುರಂಹಕಾರದ ಮಾತನಾಡುವ ಮೂಲಕ ರೈತನಿಗೆ ಬೆದರಿಕೆ ಹಾಕಿರುವುದನ್ನು ವಿರೋಧಿಸಿ ಈಗಾಗಲೇ ರಿಪ್ಪನ್‌ಪೇಟೆ ಠಾಣೆಗೆ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ ಜಿಲ್ಲಾ ಸಂಘಟನೆಯವರು ದೂರು ನೀಡುವ ಮೂಲಕ ಕಂಪನಿಯವರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರೂ ಕೂಡಾ ಕಂಪನಿಯ ಮಾಲೀಕ ಈವರೆಗೂ ಠಾಣೆಗೆ ಬಾರದೇ ದರ್ಪತೋರಿಸುವ ವರ್ತನೆಯಲ್ಲಿ ತೊಡಗಿದ್ದು ಇನ್ನು ಎರಡು ದಿನಗಳ ಕಾಲಾವಕಾಶ ನೀಡಿ ಅಷ್ಟರೊಳಗೆ ಬಂದು ಅನ್ಯಾಯಕ್ಕೆ ಒಳಗಾಗಿರುವ ರೈತನಿಗೆ ನ್ಯಾಯ ಕೊಡುವಲ್ಲಿ ನಿರ್ಲಕ್ಷ್ಯ ವಹಿಸಿದರೆ ನಾವು ಉಗ್ರ ಪ್ರತಿಭಟನೆಯನ್ನು ರಿಪ್ಪನ್‌ಪೇಟೆಯ ಶಿವಮೊಗ್ಗ ರಸ್ತೆಯಲ್ಲಿರುವ ಕಾಳೆ ಅಗ್ರಿಟೆಕ್ ಷೋ ರೂಂ ಎದುರು ಹಮ್ಮಿಕೊಳ್ಳುವ ಮೂಲಕ ರೈತನಿಗೆ ಬೆಂಬಲವಾಗಿ ನಿಲ್ಲುತ್ತೇವೆಂದು ಎಚ್ಚರಿಕೆ ನೀಡಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕರ ಮಹಿಳಾ ಪರಿಷತ್‌ನ ರಾಜ್ಯಾಧ್ಯಕ್ಷ ಪೂಜಾಶೆಟ್ಟಿ, ರೈತ ಸತೀಶ ಮಂಡ್ರಳ್ಳಿ, ರಾಜೇಂದ್ರ ಸಾವಂತೂರು ಹಾಗೂ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತನ ಜಿಲ್ಲಾ ಕಾರ್ಯದರ್ಶಿ ಹೆಚ್.ಜಿ.ವೇದಾವತಿ, ನಿರ್ದೇಶಕರಾದ ನಾಗೇಶ, ಎನ್.ಗೀತಾ ಅಣ್ಣಪ್ಪ, ಅನ್ನಪೂರ್ಣ ರವಿಕುಮಾರ್ ಹೆಚ್, ಸೀತಮ್ಮ ರಾಜು, ಕೆ.ಸುಶೀಲ ಇನ್ನಿತರರು ಹಾಜರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]