ಹೊಸನಗರ

ಹೊಸನಗರ ; ಕಲ್ಲುಕ್ವಾರೆ ನೀರಿನಲ್ಲಿ ಮುಳುಗಿ ಶಾಲಾ ಬಾಲಕ ಸಾವು !

ಹೊಸನಗರ ; ನೀರಿನಲ್ಲಿ ಮುಳುಗಿ ಬಾಲಕನೊರ್ವ ಮೃತಪಟ್ಟ ಘಟನೆ ತಾಲೂಕಿನ ಬ್ರಹ್ಮೇಶ್ವರದ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮಾರುತಿಪುರ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಶಮಂತ (15) ಮೃತ ಬಾಲಕ.

ಹೇಗಾಯ್ತು ಘಟನೆ ?

ಕೂಲಿ ಕೆಲಸ ಮಾಡುವ ಮೃತನ ತಾಯಿ ಮನೆ ಸಮೀಪದ ಕಲ್ಲುಕ್ವಾರಿ ಹೊಂಡದಲ್ಲಿ ಬಟ್ಟೆ ಒಗೆದಿದ್ದಳು. ಕೆಲಸಕ್ಕೆ ಹೋಗಲು ಸಮಯವಾದ ಕಾರಣ ಒಗೆದ ಬಟ್ಟೆಯನ್ನು ಮನೆಗೆ ತಂದಿಡಲು ಮಗನಿಗೆ ತಿಳಿಸಿ ತಾಯಿ ಲಕ್ಷ್ಮಿ ಕೂಲಿ ಕೆಲಸಕ್ಕೆ ಹೋಗಿದ್ದಳು. ಸಂಜೆ ಮನೆಗೆ ಮರಳಿದಾಗ ಮಗ ಇಲ್ಲದನ್ನು ಕಂಡು ಅಕ್ಕ-ಪಕ್ಕದವರನ್ನು ವಿಚಾರಿಸಿದ್ದಾರೆ. ಬಳಿಕ ಹುಡುಕಾಡಿದಾಗ ಕಲ್ಲುಕ್ವಾರೆಯಲ್ಲಿ ಸಂಗ್ರಹವಾಗ ನೀರಿನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದ್ದು ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಸ್ಥಳೀಯರ ಆಕ್ರೋಶ :

ಕೂಲಿ ಮಾಡುತ್ತಾ ಜೀವನ ಸಾಗಿಸುವ ಮರುಗೇಶ್ ಹಾಗೂ ಲಕ್ಷ್ಮಿ ದಂಪತಿಗೆ ದಿಕ್ಕಾಗಿದ್ದ ಒಬ್ಬನೇ ಮಗ ಶಮಂತ ಅವಘಡದಲ್ಲಿ ಮೃತಪಟ್ಟಿರುವುದು ಆಘಾತ ಉಂಟುಮಾಡಿದೆ. ಅಂಬೇಡ್ಕರ್ ಕಾಲೋನಿ ಸುತ್ತಮುತ್ತ 80 ಕುಟುಂಬಗಳು ವಾಸವಿದ್ದು, ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಪರಿವರ್ತಕ ಇಲ್ಲದೇ ವೋಲ್ಟೇಜ್ ಸಮಸ್ಯೆ ಇದೆ. ಪಂಪ್‌ಗಳು ಚಾಲನೆಯಾಗುತ್ತಿಲ್ಲ. ಸಾಕಷ್ಟು ನೀರು ಸಂಗ್ರಹಿಸಲು ಸಾಧ್ಯವಾಗದ ಕಾರಣಕ್ಕೆ ಮನೆ ಸಮೀಪದ ಕಲ್ಲುಕ್ವಾರಿ ನೀರಿನಲ್ಲಿ ಬಟ್ಟೆ ತೊಳೆಯುವಂತಾಗಿದೆ. ಇದರಿಂದಾಗಿ ಬಾಲಕ ಅಲ್ಲಿಗೆ ಹೋಗಿ ನೀರಿನಲ್ಲಿ ಮುಳುಗಿ ಸಾಯುವಂತಾಯಿತು. ಮೆಸ್ಕಾಂ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ವಿದ್ಯುತ್ ಸಮಸ್ಯೆ ಬಗೆಹರಿಸಿಲ್ಲ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ರುಕ್ಮಿಣಿರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>