ಹೊಸನಗರ

ನ್ಯಾಯಬೆಲೆ ಅಂಗಡಿಗಳಿಗೆ ಆದಾಯ ಹಾಗೂ ಜಾತಿ ಪ್ರಮಾಣಪತ್ರ ಸದ್ಯಕ್ಕೆ ನೀಡುವ ಅಗತ್ಯವಿಲ್ಲ : ತಹಸೀಲ್ದಾರ್ ಭರತ್‌ರಾಜ್

ಹೊಸನಗರ : ತಾಲ್ಲೂಕಿನ ನ್ಯಾಯಬೆಲೆ ಅಂಗಡಿಯ ಮಾಲೀಕರು ಪಡಿತರ ಚೀಟಿದಾರರಿಗೆ ಅಗತ್ಯ ದಾಖಲೆಯಾದ ಜಾತಿ ಪ್ರಮಾಣಪತ್ರ ಹಾಗೂ ಆದಾಯ ಪ್ರಮಾಣ ನೀಡಲು ತಿಳಿಸಿದ್ದು ಜಿಲ್ಲಾಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ಸದ್ಯಕ್ಕೆ ನೀಡುವುದು ಬೇಡ ಎಂದು ಹೊಸನಗರ ತಹಸೀಲ್ದಾರ್ ಭರತ್‌ರಾಜ್‌ ತಿಳಿಸಿದ್ದಾರೆ.

ಎಸ್‌ಸಿ, ಎಸ್‌ಟಿಯವರು ಆದಾಯ ಹಾಗೂ ಜಾತಿ ಪ್ರಮಾಣಪತ್ರ ನೀಡಬೇಕು :

ಸರ್ಕಾರದ ಆದೇಶದ ಮೇರೆಗೆ ಹೊಸನಗರ ತಾಲ್ಲೂಕಿನಲ್ಲಿರುವ ಎಸ್‌ಸಿ, ಎಸ್‌ಟಿ ಜನಾಂಗದವರು ಜಾತಿ ಪ್ರಮಾಣಪತ್ರ ಪಡಿತರ ಚೀಟಿಯ ಜೋಡಣೆಗೆ ನೀಡುವುದು ಕಡ್ಡಾಯವಾಗಿದ್ದು ಇತರೆ ಜನಾಂಗದವರಿಗೆ ಕಡ್ಡಾಯವಾಗಿಲ್ಲ ಎಂದು ತಿಳಿಸಿದ್ದು ಸರ್ಕಾರದ ಮುಂದಿನ ಆದೇಶ ಬರುವವರೆಗೆ ಪ್ರತಿ ತಿಂಗಳು ಎಂದಿನಂತೆ ಆಹಾರ ಧಾನ್ಯಗಳನ್ನು ಪಡೆಯಬಹುದು ಎಂದು ತಿಳಿಸಿದರು.

ನ್ಯಾಯಬೆಲೆ ಅಂಗಡಿಯವರ ಮೇಲೆ ಕ್ರಮ ;

ಕೆಲವೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ಮುಂದಿನ ತಿಂಗಳಿಂದ ಆದಾಯ ಪ್ರಮಾಣಪತ್ರ ಹಾಗೂ ಜಾತಿ ಪ್ರಮಾಣಪತ್ರ ನೀಡದಿದ್ದರೆ ಪಡಿತರ ಧಾನ್ಯ ನೀಡುವುದಿಲ್ಲ ಎಂದು ತಿಳಿಸಿರುವುದರಿಂದ ಹೊಸನಗರದ ಪಡಿತರ ಚೀಟಿದಾರರು ಕಂಗಾಲಾಗಿದ್ದು ಎಲ್ಲರೂ ಕಂದಾಯ ಇಲಾಖೆಗೆ ಹಾಗೂ ಗ್ರಾಮ ಆಡಳಿತಾಧಿಕಾರಿಗಳ ಕಛೇರಿಗೆ ಅಲೆಯುತ್ತಿದ್ದಾರೆ. ಈ ಬಗ್ಗೆ ಶಿವಮೊಗ್ಗದ ಡಿ.ಡಿಯವರ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಸರ್ಕಾರದ ಹಾಗೂ ಕಂದಾಯ ಇಲಾಖೆಯ ಆದೇಶವಿಲ್ಲದೆ ಎಸ್‌ಸಿ, ಎಸ್‌ಟಿ ಜನಾಂಗವನ್ನು ಹೊರತುಪಡಿಸಿ ಇತರೆಯವರು ನ್ಯಾಯಬೆಲೆ ಅಂಗಡಿಯವರು ಪಡಿತರ ಚೀಟಿದಾರರಿಗೆ ಕಡ್ಡಾಯವಾಗಿ ಜಾತಿ ಹಾಗೂ ಆದಾಯ ಪ್ರಮಾಣಪತ್ರ ನೀಡಬೇಕು. ಇಲ್ಲವಾದರೆ ಪಡಿತರ ಧಾನ್ಯ ನೀಡುವುದಿಲ್ಲ ಎಂದು ತಾಕೀತು ಮಾಡಿದರೆ ಅಂತಹ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

Leave a Comment