ರಿಪ್ಪನ್‌ಪೇಟೆ ; ಸ್ವದೇಶಿ ವಸ್ತುಗಳ ಮಾರಾಟ ಮೇಳ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಮಹಿಳೆಯರು ಬಿಡುವಿನ ವೇಳೆಯಲ್ಲಿ ತಯಾರಿಸಲಾದ ಕಸೂತಿ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಆರ್ಥಿಕ ಸ್ವಾಲಂಬನೆಗೆ ಮುಂದಾಗಿದ್ದಾರೆಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಆರ್ ಬಂಡಿ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಒಕ್ಕಲಿಗರ ಸಂಘದ ಕುವೆಂಪು ಸಮುದಾಯ ಭವನದಲ್ಲಿ ಆಯೋಜಿಸಲಾಗಿರುವ ಸ್ವದೇಶಿ ವಸ್ತುಗಳ ಮಾರಾಟ ಹಾಗೂ ಪ್ರದರ್ಶನ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಜಾಗೃತರಾಗಿ ತಾವುಗಳೇ ತಮ್ಮ ಮನೆಯಲ್ಲಿ ಬಿಡುವಿನ ವೇಳೆಯಲ್ಲಿ ಸ್ಥಳೀಯ ಕಚ್ಚಾವಸ್ತುಗಳ ಮೂಲಕ ಕರಕುಶಲ ವಸ್ತುಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರೊಂದಿಗೆ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗುವುದೆಂದು ಹೇಳಿ ಸರ್ಕಾರ ಸಹ ಉತ್ತೇಜನ ನೀಡುವುದರೊಂದಿಗೆ ಮಹಿಳೆಯರ ಕರಕುಶಲ ಕೌಶಲ್ಯಾಭಿವೃದ್ದಿಗೆ ಸಹಕಾರಿಯಾಗುವುದೆಂದರು.

ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಬಿ.ಲಕ್ಷ್ಮಣಗೌಡ, ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಬಂಡಿ ರಾಮಚಂದ್ರ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎನ್.ವರ್ತೇಶ್, ಭದ್ರಾವತಿಯ ಅನ್ನಪೂರ್ಣ, ಕಲ್ಲೂರು ತೇಜ್‌ಮೂರ್ತಿ, ಇನ್ನಿತರರು ಪಾಲ್ಗೊಂಡಿದ್ದರು.

ಮಹಿಳೆಯರ ಹಾಗೂ ಹೆಣ್ಣು ಮಕ್ಕಳ ಉಡುಪಿನ ಬಟ್ಟೆಯ ಮೇಲೆ ವಿನ್ಯಾಸ ಮಾಡಲಾದ ಬಟ್ಟೆಗಳು, ಊದುಬತ್ತಿ ಹಾಗೂ ಕುಶಲ ಕಲೆಗಳ ಚಿತ್ತಾರದ ದೇಶಿಯ ವಸ್ತುಗಳ ಪ್ರದರ್ಶನ ಜನರನ್ನು ಗಮನಸೆಳೆಯಿತು.

ಭದ್ರಾವತಿಯ ಶಿವಮೊಗ್ಗ ಹಾಗೂ ಹಾಸನ, ಚಿಕ್ಕಮಗಳೂರು, ಸಾಗರ ವಿವಿಧಡೆಗಳಿಂದ ಸ್ವದೇಶಿ ವಸ್ತುಗಳ ಮಾರಾಟ ಮೇಳಕ್ಕೆ ಆಗಮಿಸಿ ಅಂಗಡಿ ಕೌಂಟರ್ ಆರಂಭಿಸಿದ್ದರು.

Leave a Comment