ಹೊಸನಗರ ; ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣರ ಹುಟ್ಟುಹಬ್ಬದ ಪ್ರಯುಕ್ತ ಹೊಸನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳ ಹಾಗೂ ಹೊರ ರೋಗಿಗಳಿಗೆ ಬ್ರೆಡ್, ಹಣ್ಣು-ಹಂಪಲುಗಳನ್ನು ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ನೇತೃತ್ವದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಲಿಂಗರಾಜ್, ಡಾ. ಹೇಮಾಂತ್, ಗಜೇಂದ್ರ, ಕಳೂರು ಸೊಸೈಟಿಯ ಅಧ್ಯಕ್ಷ ವಿನಯ್ಕುಮಾರ್ ದುಮ್ಮ, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಎರಗಿ ಉಮೇಶ್, ಬಾವಿಕಟ್ಟೆ ಸತೀಶ, ಗೇರುಪುರ ಧರ್ಮರಾಜ್, ಜಯನಗರ ಗೋಪಿನಾಥ್, ನಾಸೀರ್, ಬ್ರಹ್ಮೇಶ್ವರ ಸುಧೀರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಹಿಂದಿನ ವರ್ಷ ಅದ್ದೂರಿ ಹುಟ್ಟುಹಬ್ಬ, ಈ ವರ್ಷ ಬರೀ ಬ್ಯಾನರ್ ಹಾವಳಿ !
ಕಳೆದ ವರ್ಷ ಬೇಳೂರು ಗೋಪಾಲಕೃಷ್ಣರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುವುದರ ಜೊತೆಗೆ ಸಾವಿರಾರು ಜನರಿಗೆ ಅನ್ನಸಂತರ್ಪಣೆ ರಾತ್ರಿ ಸ್ವೀಟ್ ಹಂಚಿಕೆ ಅನುಶ್ರೀ ಹಾಗೂ ಅರ್ಜುನ್ ಜನ್ಯರಿಂದ ಆರ್ಕೆಸ್ಟ್ರಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾತ್ರೆಯ ರೀತಿಯಲ್ಲಿ ಕಾರ್ಯಕ್ರಮ ಮಾಡಿದ್ದು ಆದರೆ ಈ ವರ್ಷ ಬರೀ ಹುಟ್ಟುಹಬ್ಬದ ಬ್ಯಾನರ್ ಮಾತ್ರ ಹೊಸನಗರ ಪಟ್ಟಣದ ತುಂಬೆಲ್ಲ ರಾರಾಜಿಸುತ್ತಿದೆ.

