ರಿಪ್ಪನ್‌ಪೇಟೆ ; ರಂಜಾನ್ ಪ್ರಯುಕ್ತ ಶಾಂತಿ ಸಭೆ

Written by Mahesha Hindlemane

Published on:

ರಿಪ್ಪನ್‌ಪೇಟೆ ; ರಂಜಾನ್ ಹಬ್ಬ ಐದಾರು ದಿನಗಳಲ್ಲಿದ್ದು ಈ ಹಬ್ಬದ ಅಂಗವಾಗಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಅಧ್ಯಕ್ಷತೆಯಲ್ಲಿ ಶಾಂತಿ ಸಭೆಯನ್ನು ನಡೆಸಲಾಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಿಪ್ಪನ್‌ಪೇಟೆಯಲ್ಲಿ ಮೂರು ಮಸೀದಿಗಳಿದ್ದು ಮುಸ್ಲಿಂ ಸಮುದಾಯದ ಮುಖಂಡರನ್ನು ಹಾಗೂ ಹಿಂದೂ ಸಮುದಾಯದವರನ್ನು ಒಟ್ಟಿಗೆ ಸಭೆಗೆ ಕರೆಯಲಾಗಿದ್ದು ಸಭೆಯಲ್ಲಿ ಸಾಕಷ್ಟು ವಿಚಾರಗಳ ಕುರಿತು ಮುಖಂಡರು ಪ್ರಸ್ತಾಪಿಸಿ ಚರ್ಚಿಸಿದರು.

ಹಬ್ಬದ ಹೆಸರಿನಲ್ಲಿ ಗ್ರಾಮದಲ್ಲಿ ಯಾವುದೇ ತರಹದ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಸೂಕ್ತ ತಿಳುವಳಿಕೆಗಳೊಂದಿಗೆ ಹಬ್ಬವನ್ನು ಸಂಭ್ರಮದಿಂದ ಶಾಂತಿ ಸೌಹಾರ್ದತೆಯಲ್ಲಿ ಆಚರಿಸುವುದರೊಂದಿಗೆ ವರ್ಷದಲ್ಲಿ ಬರುವ ಹಬ್ಬವನ್ನು ಸಡಗರದೊಂದಿಗೆ ಆಚರಿಸಿ ಶಾಂತಿ ನೆಮ್ಮದಿಯಿಂದ ಎಲ್ಲರು ಇರುವಂತೆ ಹೇಳಿದರು.

ಸಭೆಯಲ್ಲಿ ಜುಮ್ಮಾ ಮಸೀಧಿಯ ಅಧ್ಯಕ್ಷ ಹಸನಬ, ಮುಖಂಡರಾದ ಆರ್.ಎ.ಚಾಬುಸಾಬ್, ಅಮೀರ್‌ಹಂಜಾ, ಗ್ರಾಮ ಪಂಚಾಯಿತಿ ನಿಕಟಪೂರ್ವ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಆಸಿಫ್‌ಭಾಷಾ, ರವೀಂದ್ರ ಕೆರೆಹಳ್ಳಿ, ಮೆಕ್ಕಾ ಮಸೀದಿ ಅಧ್ಯಕ್ಷ ಅಮೀರ್‌ಸಾಬ್, ಹಾಗೂ ಕೋಡೂರು ಮಸೀದಿಯ ಅಧ್ಯಕ್ಷ ಅಮೀರ್ ಹಂಜಾ, ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ ಇನ್ನಿತರರು ಭಾಗವಹಿಸಿದ್ದರು.

Leave a Comment