ಶಿವಮೊಗ್ಗ: ಮೆಸ್ಕಾಂ ಘಟಕ-2ರ ನಗರ ಉಪವಿಭಾಗ 1ರ ವ್ಯಾಪ್ತಿಯಲ್ಲಿ ರಾಘವೇಂದ್ರ ಸ್ವಾಮಿ ಮಠದ ರಸ್ತೆ ಜಿಲ್ಲೆಯ ಪಂಚಾಯಿತಿ ಎದುರಿನಲ್ಲಿ ಸ್ಪನ್ ಪೋಲ್ ಸ್ಥಳಾಂತರಿಸುವ ಕಾಮಗಾರಿಯು ಜಾರಿಯಲ್ಲಿದೆ. ಈ ಕಾರಣದಿಂದಾಗಿ ಜೂನ್ 29,ಭಾನುವಾರದಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಹಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಸರಬರಾಜು ಕಡಿತಗೊಳ್ಳಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
- ರಾಘವೇಂದ್ರ ಸ್ವಾಮಿ ಮಠದ ರಸ್ತೆ
- ತಿಲಕ್ನಗರ
- ರತ್ನಮ್ಮ ಮಾಧವ್ರಾವ್ ರಸ್ತೆ
- ಕುವೆಂಪು ರಸ್ತೆ
- ಪಾರ್ಕ್ ಬಡಾವಣೆ
- ದುರ್ಗಿಗುಡಿ
- ಶಿವಮೂರ್ತಿ ಸರ್ಕಲ್
- ಜಿಲ್ಲಾ ಪಂಚಾಯಿತಿ ರಸ್ತೆ ಸುತ್ತಮುತ್ತಲಿನ ಪ್ರದೇಶ
ಆಲ್ಕೊಳ ವಿ.ವಿ. ಕೇಂದ್ರದ ಎ.ಎಫ್-8 ಫೀಡರ್ನಲ್ಲಿ ತುರ್ತು ಕಾಮಗಾರಿ: ಬೆಳಿಗ್ಗೆ 9 ರಿಂದ ಮಧ್ಯಾಹ್ನ 2ರವರೆಗೆ ವಿದ್ಯುತ್ ವ್ಯತ್ಯಯ
ಕಾರಣ: ಎ.ಎಫ್-8 ಫೀಡರ್ನಲ್ಲಿ ತುರ್ತು ನಿರ್ವಹಣಾ ಕಾರ್ಯ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
- ಲಕ್ಷೀಪುರ
- ಕೆಂಚಪ್ಪ ಲೇಔಟ್
- ಎನ್.ಎಂ.ಸಿ. ಕಾಂಪೌಂಡ್
- ಸೂಡಾ ಕಚೇರಿ
- ಪೊಲೀಸ್ ಚೌಕಿ
- ಸವಿ ಬೇಕರಿ ಎದುರು
- 100 ಅಡಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶ
ಮೆಸ್ಕಾಂ ಪ್ರಕಟಣೆಯಂತೆ, ಸಾರ್ವಜನಿಕರು ಈ ತಾತ್ಕಾಲಿಕ ತೊಂದರೆಗೆ ಸಹಕರಿಸಬೇಕೆಂದು ಕೋರಲಾಗಿದೆ. ಕಾಮಗಾರಿ ಪೂರ್ಣಗೊಂಡ ತಕ್ಷಣ ವಿದ್ಯುತ್ ಸರಬರಾಜು ಪುನಃ ಆರಂಭಗೊಳ್ಳಲಿದೆ.
Read More :ವಾಹನ ಖರೀದಿಗೆ ಸಿಗಲಿದೆ ₹3 ಲಕ್ಷ ಸಬ್ಸಿಡಿ! ‘ಸ್ವಾವಲಂಬಿ ಸಾರಥಿ’ ಯೋಜನೆಗೆ ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ !