ಹೊಸನಗರ ಶ್ರೀ ನಾರಾಯಣಗುರು ಮಲೆನಾಡು ಸೌಹಾರ್ದ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ರಾಜಮೂರ್ತಿ ನಿಧನ !

Written by Mahesha Hindlemane

Published on:

HOSANAGARA ; ಮಾರುತಿಪುರ ಗ್ರಾಪಂ ವ್ಯಾಪ್ತಿಯ ಮೇಲಿನಸಂಪಳ್ಳಿ ಗ್ರಾಮದ ಬಿಸಿನಕೊಪ್ಪ ನಿವಾಸಿ ರಾಜಮೂರ್ತಿ ಬಿ.ಎಸ್. (40) ಅಲ್ಪಕಾಲದ ಅನಾರೋಗ್ಯದಿಂದ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಇಂದು ನಿಧನರಾದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕೃಷಿಕರಾಗಿದ್ದ ಇವರು ಪ್ರಸ್ತುತ ಹೊಸನಗರ ಶ್ರೀ ನಾರಾಯಣಗುರು ಮಲೆನಾಡು ಸೌಹಾರ್ದ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು‌.

ಮೃತರು ಪತ್ನಿ, ತಂದೆ, ತಾಯಿ, ಸಹೋದರ ಮತ್ತು ಸಹೋದರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಸಂತಾಪ :

ರಾಜಮೂರ್ತಿ ಅಕಾಲಿಕ ನಿಧನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ತೀವ್ರ ಸಂತಾಪ ಸೂಚಿಸಿದ್ದು ‘ನಿಷ್ಠಾವಂತ ಕಾರ್ಯಕರ್ತ. ಇನ್ನೂ ಬಾಳಿ ಬದುಕಬೇಕಾದ ಯುವ ಮುಖಂಡ. ಇವರ ಅಕಾಲಿಕ ಮರಣದ ಸಂಗತಿ ತಿಳಿದು ಅತ್ಯಂತ ನೋವುಂಟಾಯಿತು. ಭಗವಂತ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಮತ್ತು ಮೃತರ ಆತ್ಮಕ್ಕೆ ಸದ್ಗತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Leave a Comment